ಸಿಂದಗಿ, ಹಾನಗಲ್ ಉಪಚುನಾವಣಾ ಕದನ – ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ

Public TV
1 Min Read

ಬೆಂಗಳೂರು: ಇಂದು ಸಂಜೆ ಸಿಂದಗಿ ಹಾಗೂ ಹಾನಗಲ್ ಉಪಚುನಾವಣಾ ಕದನದ ಪ್ರಚಾರಕ್ಕೆ ಅಂತಿಮ ತೆರೆ ಬೀಳಲಿದೆ. ಜೊತೆಗೆ ಸಂಜೆ ರಾಜಕೀಯ ನಾಯಕರ ಮಧ್ಯೆ ಕೊನೆಯ ಮಾತಿನ ಸಮರ ನಡೆಯಲಿದೆ.

ಮಂಗಳವಾರ ಸಿಎಂ ಕಂಬಳಿ ಹಾಕಿದ್ದನ್ನು ಪ್ರಶ್ನಿಸಿದ್ದ ಸಿದ್ದರಾಮಯ್ಯಗೆ ಇಡೀ ಬಿಜೆಪಿ ನಾಯಕರೇ ತಿರುಗಿ ಬಿದ್ದಿದ್ರು. ಅವನು ಕುರುಬರಲ್ಲಿ ಹುಟ್ಟಿದ್ದನಾ ಎಂಬುದನ್ನೇ ಆಯುಧ ಮಾಡಿಕೊಂಡ ಬಿಜೆಪಿ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಮೈನಾರಿಟಿ ವೋಟಿಗಾಗಿ ಜೊಲ್ಲು ಸುರಿಸುತ್ತಾರೆ – ಅರಗ ಜ್ಞಾನೇಂದ್ರ

ಸಿ.ಟಿ ರವಿ, ಎಚ್.ವಿಶ್ವನಾಥ್, ಸೋಮಣ್ಣ ತಿರುಗೇಟು ಕೊಟ್ಟಿದ್ದಾರೆ. ಅಲ್ಲದೇ ನನ್ನದು ಒಂದು ಇರಲಿ ಎಂದು ಕುಮಾರಸ್ವಾಮಿಯೂ ಸಿದ್ದುಗೆ ಟಾಂಗ್ ಕೊಟ್ಟಿದ್ದಾರೆ. ಬನ್ನಿ ನಿಮಗೆ ಕಂಬಲಿ ಹೆಣೆಯಲು ಬರುತ್ತಾ ಅಂತ ನೋಡೇ ಬಿಡೋಣ ಎಂದು ಆಹ್ವಾನಿಸಿದ್ದಾರೆ. ಜೊತೆಗೆ ಸಿಂದಗಿಯಲ್ಲಿ ಗೋವಿಂದ ಕಾರಜೋಳ ಕೂಡ ಭಾಗ್ಯಗಳ ಹೆಸರಿನಲ್ಲಿ ಸಿದ್ದರಾಮಯ್ಯಗೆ ತಿವಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *