ಕಾಂಗ್ರೆಸ್ ಉಳಿಸಲು ಜೆಡಿಎಸ್ ಅಭ್ಯರ್ಥಿಯಾದೆ: ಪ್ರಮೋದ್ ಮಧ್ವರಾಜ್

Public TV
1 Min Read

– ಒಂದು ಶಾಲು ಎರಡು ಚಿಹ್ನೆ ಮುದ್ರಣ

ಉಡುಪಿ: ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಜೆಡಿಎಸ್ ಟಿಕೆಟ್ ಪಡೆದು ಉಡುಪಿಗೆ ಆಗಮಿಸಿದ್ದಾರೆ. ಮೈತ್ರಿ ಟಿಕೆಟ್ ಪಡೆದು ಉಡುಪಿಗೆ ಬಂದ ಅವರು ಮೊದಲು ಕಾಂಗ್ರೆಸ್ ಕಚೇರಿಗೆ ಭೇಟಿ ಕೊಟ್ಟರು. ವಿಭಿನ್ನ ಡಿಸೈನ್ ಶಾಲು ತೊಟ್ಟು ಬಂದು ಮೈತ್ರಿ ಧರ್ಮ ಪಾಲಿಸಿದರು. ವಿಭಿನ್ನ ಶಾಲು ತಯಾರಿ ಮಾಡಿರುವ ಪ್ರಮೋದ್ ಮಧ್ವರಾಜ್, ಕೈ ಮತ್ತು ತೆನೆ ಹೊತ್ತ ರೈತ ಮಹಿಳೆಯ ಚಿತ್ರ ಮುದ್ರಿಸಿಕೊಂಡಿದ್ದಾರೆ.

ಒಂದೇ ಶಾಲಿನಲ್ಲಿ ಎರಡು ಪಕ್ಷದ ಚಿಹ್ನೆ ಮುದ್ರಿಸಿಕೊಂಡಿದ್ದೇನೆ. ಇಂತಹ ಶಾಲು ಈವರೆಗೆ ಯಾರೂ ತಯಾರು ಮಾಡಿಲ್ಲ. ಈ ಶಾಲನ್ನು 18ರ ವರೆಗೆ ತೊಟ್ಟಿರುತ್ತೇನೆ. ಚಿಹ್ನೆಯ ಬಗ್ಗೆ ಜನರಿಗೆ ಉತ್ತರ ಕೊಟ್ಟು ಸುಸ್ತಾಯ್ತು. ಹಾಗಾಗಿ ಗೊಂದಲವೇ ಬೇಡ ಅಂತ ಶಾಲಿಗೊಂದು ಹೊಸ ರೂಪ ಕೊಟ್ಟಿರುವುದಾಗಿ ಪ್ರಮೋದ್ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಉಳಿಸಲು ಜೆಡಿಎಸ್ ಅಭ್ಯರ್ಥಿಯಾದೆ:
ಕಾಂಗ್ರೆಸ್ ಉಳಿಸಲು ಜೆಡಿಎಸ್ ಅಭ್ಯರ್ಥಿಯಾದೆ. ರಾಜ್ಯದಲ್ಲಿ ಹೇಗಿದ್ಯೋ ಗೊತ್ತಿಲ್ಲ. ಉಡುಪಿಯಲ್ಲಿ ಕಾಂಗ್ರೆಸ್- ಜೆಡಿಎಸ್ ಹಾಲು ಜೇನಿನಂತೆ ಬೆರೆಯಲಿದೆ. ನಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಮೈತ್ರಿ ಧರ್ಮದಂತೆ ಉಡುಪಿ-ಚಿಕ್ಕಮಗಳೂರು ಜೆಡಿಎಸ್ ಪಾಲಾಯ್ತು. ಜೆಡಿಎಸ್ ಅಭ್ಯರ್ಥಿಯಾಗಿ ಕಾಂಗ್ರೆಸ್ ಪರವಾಗಿ ಸ್ಪರ್ಧಿಸ್ತೇನೆ. ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಈ ಅವಕಾಶ ಸಿಕ್ಕಿದೆ ಎಂದರು.

ಕೆಲಸ ಮಾಡುವ ಎಂಪಿ ಆಗುವೆ:
ಕ್ಷೇತ್ರಕ್ಕೆ ಕೆಲಸ ಮಾಡುವ ಸಂಸದರನ್ನು ಆಯ್ಕೆ ಮಾಡಿ ಎಂದು ಪ್ರಮೋದ್ ಮಧ್ವರಾಜ್ ಕರೆ ನೀಡಿದರು. ಮನೆಗೆ ಹೋಗುವ ಮೊದಲು ಕಾಂಗ್ರೆಸ್ ಕಚೇರಿಗೆ ಭೇಟಿ ಕೊಟ್ಟಿದ್ದೇನೆ. ಮಾರ್ಚ್ 25ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ಎರಡು ದಿನದಲ್ಲಿ ಎರಡು ಜಿಲ್ಲೆಗಳ ಪ್ರವಾಸ ಮಾಡುತ್ತೇನೆ ಎಂದರು. ಕಾಂಗ್ರೆಸ್ ಪಕ್ಷ ಉಳಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಗೆದ್ದು ಬಂದರೆ ರಾಜಧರ್ಮ ಪಾಲಿಸುತ್ತೇನೆ ಎಂದು ಮಧ್ವರಾಜ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *