ಮೈಸೂರು ಮೃಗಾಲಯದಲ್ಲಿ ಕೋಬ್ರಾ, ಹುಲಿ ಸಾವು

Public TV
1 Min Read

ಮೈಸೂರು: ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್(ಮೈಸೂರು ಮೃಗಾಲಯ)ನಲ್ಲಿ ಹುಲಿ ಹಾಗೂ ಕಿಂಗ್ ಕೋಬ್ರಾ ಸಾವನ್ನಪ್ಪಿವೆ. ಕಿಂಗ್ ಕೋಬ್ರಾ ಲಿವರ್ ಸಮಸ್ಯೆಯಿಂದ ಮೃತಪಟ್ಟಿದ್ದರೆ, ಹುಲಿ ಹೃದಯಾಘಾತದಿಂದ ಸಾವನ್ನಪ್ಪಿದೆ ಎನ್ನಲಾಗಿದೆ.

ಈ ಬಗ್ಗೆ ಮೈಸೂರು ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಪ್ರಾಣಿಗಳ ವಿನಿಮಯ ಯೋಜನೆಯಡಿ ಮಂಗಳೂರಿನ ಪಿಲಿಕುಳ ಮೃಗಾಲಯದಿಂದ 2 ಹುಲಿ, 2 ಹಾವುಗಳನ್ನ ಮೈಸೂರು ಮೃಗಾಲಯಕ್ಕೆ ತರಿಸಲಾಗಿತ್ತು. ಆದರೆ ಪ್ರಾಣಿಗಳನ್ನು ಆರೋಗ್ಯ ವಿಚಾರಿಸಲು ಪ್ರತ್ಯೇಕವಾಗಿ ಇಡಲಾಗಿತ್ತು. ಫೆ. 29ರ ಬೆಳಗ್ಗೆ ಪೈಥಾನ್ ಹೆಸರಿನ ಕಿಂಗ್ ಕೋಬ್ರಾ ಸಾವನ್ನಪ್ಪಿತ್ತು. ನಂತರ ಅದರ ಮೃತದೇಹವನ್ನ ಪರೀಕ್ಷೆಗೆ ಒಳಪಡಿಸಲಾಯಿತು. ಆಗ ಹಾವು ಲಿವರ್ ಸಮಸ್ಯೆಯಿಂದ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು.

ಭಾನುವಾರ ಬೆಳಗ್ಗೆ ಒಂದು ಹುಲಿ ಸಹ ಮೃಗಾಲಯದಲ್ಲಿ ಮೃತಪಟ್ಟಿದೆ. ಅದರ ಮೃತದೇಹವನ್ನ ಸಹ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದು ಹೃದಯಾಘಾತದಿಂದ ಸಾವನ್ನಪ್ಪಿರುವುದು ತಿಳಿದು ಬಂದಿದೆ. ಪರೀಕ್ಷೆಗೆ ಒಳಪಡಿಸಿದ ತಕ್ಷಣವೇ ವೈದ್ಯರು ಈ ಬಗ್ಗೆ ತಿಳಿಸಿದ್ದಾರೆ.

ಪ್ರಾಣಿಗಳು ಮೃತಪಡಲು ಆರೋಗ್ಯ ಸಮಸ್ಯೆಯೇ ಕಾರಣವಾ? ಅಥವಾ ಬೇರೆ ವೈರಸ್ ಇದೆಯಾ? ಬ್ಯಾಕ್ಟೀರಿಯಾ ಇದೇಯ ಎಂಬುದನ್ನ ತಿಳಿಯಬೇಕಿದೆ. ಅದಕ್ಕಾಗಿ ಪ್ರಾಣಿಗಳ ಸ್ಯಾಂಪಲ್ ಲ್ಯಾಬ್ ಗೆ ಕಳುಹಿಸಿದ್ದೇವೆ. ರಿಪೋರ್ಟ್ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಸದ್ಯ ಮೃಗಾಲಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಮೃಗಾಲಯ ನಿರ್ದೇಶಕರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *