ಕುತ್ತಿಗೆ ಸೀಳಿ, ಕೈ ಬೆರಳು ಕತ್ತರಿಸಿ ಹುಡುಗನ ಬರ್ಬರ ಹತ್ಯೆ

Public TV
1 Min Read

ಲಕ್ನೋ: ಕುತ್ತಿಗೆ ಸೀಳಿ, ಕೈಬೆರಳುಗಳನ್ನು ಕತ್ತರಿಸಿದ ಸ್ಥಿತಿಯಲ್ಲಿ 17 ವರ್ಷದ ಬಾಲಕನ ಶವ ರಸ್ತೆ ಬದಿಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾ ನಗರದಲ್ಲಿ ನಡೆದಿದೆ.

ಮೇಲ್ನೋಟಕ್ಕೆ ಚಾಪಾದ ಚಾಕುವಿನಿಂದ ಕತ್ತು ಸೀಳಿ ಹತ್ಯೆ ಮಾಡಿರುವುದಾಗಿ ಕಾಣಿಸುತ್ತದೆ. ಸುತಾವರದಿಂದ ಚೌಮುಖಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಹುಡುಗನ ಶವ ಪತ್ತೆಯಾಗಿದ್ದು, ಆತನ ಕೈ ಹಾಗೂ ಕಾಲು ಬೆರಳುಗಳನ್ನು ದುಷ್ಕರ್ಮಿಗಳು ಕತ್ತರಿಸಿ ಎಸೆದಿದ್ದಾರೆ. ಈ ಸಂಬಂಧ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮೃತ ಹುಡುಗನನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉದ್ಧವ್‌, ಏಕನಾಥ್‌ ವೈಮನಸ್ಸಿಗೆ ಮರಾಠಿ ಸಿನಿಮಾ ಕಾರಣ?

ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ ಸಂಕಲ್ಪ್ ಶರ್ಮಾ ಅವರು, ಮೃತನನ್ನು ರೆಹಮಾನ್ (17) ಎಂದು ಗುರುತಿಸಲಾಗಿದ್ದು, ಈತ ಲಾರ್ ಟೌನ್ ನಿವಾಸಿಯಾಗಿದ್ದಾನೆ. ಈ ಪ್ರದೇಶದಲ್ಲಿ ಇರುವ ಕಿರಾಣಿ ಅಂಗಡಿಯಲ್ಲಿ ತನ್ನ ತಂದೆಗೆ ಕೆಲಸ ಮಾಡುವ ಮೂಲಕ ಸಹಾಯ ಮಾಡುತ್ತಿದ್ದನು. ತಡರಾತ್ರಿ ಬೈಕ್‍ನಲ್ಲಿ ರೆಹಮಾನ್ ಮನೆಯಿಂದ ಹೋಗಿದ್ದನು. ಇದೀಗ ರೆಹಮಾನ್ ಮೋಟಾರ್ ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: 55 ಶಾಸಕರು ನಮ್ಮ ಬಳಿ ಇದ್ದಾರೆ – ಉದ್ಧವ್ ಬೆದರಿಕೆಗೆ ಜಗ್ಗದ ರೆಬೆಲ್ಸ್

Live Tv

Share This Article
Leave a Comment

Leave a Reply

Your email address will not be published. Required fields are marked *