ಬಾವಿಯಲ್ಲಿ ಈಜಲು ಹೋಗಿ ಮೊಮ್ಮಕ್ಕಳ ಜೊತೆ ಅಜ್ಜನೂ ನೀರುಪಾಲು

Public TV
1 Min Read

ಬೆಳಗಾವಿ: ತೆರೆದ ಬಾವಿಯಲ್ಲಿ ಇಬ್ಬರು ಮೊಮ್ಮಕ್ಕಳ ಜೊತೆ ಈಜಲೂ ಹೋಗಿ ಅಜ್ಜನೂ ನೀರು ಪಾಲಾಗಿರುವ ದಾರುಣ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ.

ಅಜ್ಜ ಶ್ರೀಶೈಲ ಚರಂತಿಮಠ (67) ಮೊಮ್ಮಕ್ಕಳಾದ ಸಮರ್ಥ(12) ಹಾಗೂ ಸೋಮಯ್ಯ (11) ಮೃತ ದುರ್ದೈವಿಗಳು.

ಶಾಲೆಗೆ ರಜೆ ಇದ್ದ ಕಾರಣ ಮೊಮ್ಮಕ್ಕಳು ಸೀಗೆ ಹುಣ್ಣಿಮೆಯಲ್ಲಿರುವ ಅಜ್ಜನ ಮನೆಗೆ ಬಂದಿದ್ದಾರೆ. ಅಜ್ಜನ ಜೊತೆ ಇಬ್ಬರು ಮೊಮ್ಮಕ್ಕಳು ತೋಟಕ್ಕೆ ಹೋಗಿದ್ದಾರೆ. ಅಲ್ಲಿ ಬಾವಿಯನ್ನು ನೋಡಿ ಹಠ ಹಿಡಿದು ಬಾವಿಯಲ್ಲಿ ಈಜಲು ಅಜ್ಜನನ್ನು ಕರೆದುಕೊಂಡು ಹೋಗಿದ್ದಾರೆ. ಯಾರಿಗೂ ಈಜಲು ಬಾರದ ಕಾರಣ ಎಲ್ಲರೂ ನೀರು ಪಾಲಾಗಿದ್ದಾರೆ.

ಅಜ್ಜ ಮತ್ತು ಓರ್ವ ಮೊಮ್ಮಗನ ಶವ ಪತ್ತೆಯಾಗಿದೆ. ಸ್ಥಳಕ್ಕೆ ನೇಸರ್ಗಿ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳ ಭೇಟಿ ನೀಡಿ ಶೋಧಕಾರ್ಯ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *