ಡಿಕೆಶಿಗೆ ಸಿಎಂ ಫೋನ್ ಮಾಡಿ ಹೇಳಿದ್ದು ಏನು?

Public TV
1 Min Read

ಬೆಂಗಳೂರು: ಐಟಿ ದಾಳಿ ಮುಗಿದ 2 ದಿನದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಜೊತೆ ಮತುಕತೆ ನಡೆಸಿದ್ದಾರೆ.

ದೂರವಾಣಿ ಮೂಲಕ ಮಾತುಕತೆ ನಡೆಸಿದ ಸಿಎಂ, ಡಿಕೆಶಿಗೆ ಧೈರ್ಯ ತುಂಬಿದ್ದಾರೆ. ಬಳಿಕ ಡಿಕೆಶಿ ತಾಯಿಯ ಕುರಿತು ಅಸಮಾಧಾನ ಹೊರಹಾಕಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

ಬೇರೆ ಯಾರೇ ಹೇಳಿದ್ರೂ ನನಗೆ ಬೇಜಾರ್ ಆಗ್ತಿರಲಿಲ್ಲ. ಆದ್ರೆ ನಿನ್ ತಾಯಿಯೇ ನನ್ನ ಬಗ್ಗೆ ಹಿಂಗೆ ಹೇಳಿದ್ದು ಬಹಳ ಸಮಸ್ಯೆ ಆಗಿದೆ. ನಾವೆಲ್ಲಾ ಬಿಜೆಪಿ ವಿರುದ್ಧ ಹೋರಾಟ ನಡೆಸ್ತಿದ್ದೇವೆ ಅನ್ನೋದನ್ನ ಮರೀಬೇಡಿ. ತಾಯಿ ಗೌರಮ್ಮ ನೀಡಿದ ಹೇಳಿಕೆ ನ್ಯಾಷನಲ್ ಲೆವೆಲ್‍ನಲ್ಲಿ ವೈರಲ್ ಆಗಿದ್ಯಂತೆ. ಆಗಿದ್ದಾಯ್ತು ಹೋಗ್ಲಿ ಬಿಡು ಇಂದು ಸಂಜೆ ಸಂಪುಟ ಸಭೆಗೆ ಬಾ ಅಂತ ಸಿಎಂ ಹೇಳಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ:  ಸಿಎಂ ಸಿದ್ದರಾಮಯ್ಯ ಜೊತೆ ಕ್ಷಮೆ ಕೇಳಿದ ಡಿಕೆ ಶಿವಕುಮಾರ್

Share This Article
Leave a Comment

Leave a Reply

Your email address will not be published. Required fields are marked *