ಮೂಲ ಕಾಂಗ್ರೆಸ್ ಮತ ಕೂಡ ಬಿಜೆಪಿಗೆ ಬೀಳುತ್ತೆ- ಶಾಸಕ ರಘುಪತಿ ಭಟ್

Public TV
2 Min Read

ಉಡುಪಿ: ಉಡುಪಿ-ಚಿಕ್ಕಮಗಳೂರು ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಸ್ವಾರ್ಥದ ರಾಜಕಾರಣಿ. ಅವರಿಗೆ ಅಧಿಕಾರದ ದಾಹ ಜಾಸ್ತಿಯಾಗಿರುವುದರಿಂದ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ್ದಾರೆ. ಕೈ ಚಿಹ್ನೆ ಇಲ್ಲದಿರುವುದರಿಂದ ಎರಡು ಜಿಲ್ಲೆಯ ನೈಜ ಕಾಂಗ್ರೆಸಿಗರು ಈ ಬಾರಿ ಬಿಜೆಪಿಗೆ ಮತ ಹಾಕುತ್ತಾರೆ ಅಂತ ಶಾಸಕ ರಘುಪತಿ ಭಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ಕಾಂಗ್ರೆಸ್ ಜೆಡಿಎಸ್‍ಗೆ ಬಿಟ್ಟುಕೊಟ್ಟಿರುವುದು ಕಾಂಗ್ರೆಸ್ಸಿನ ನೈಜ ಕಾರ್ಯಕರ್ತರಿಗೆ ಬೇಸರವಾಗಿದೆ. ಉಡುಪಿಯಲ್ಲಿ ಜೆಡಿಎಸ್‍ನ ಪಂಚಾಯತ್ ಸದಸ್ಯರೂ ಕೂಡ ಇಲ್ಲ. ಹೀಗಾಗಿ ಕೈ ಚಿಹ್ನೆ ಬಿಟ್ಟು ಇಲ್ಲಿನ ಜನಕ್ಕೆ ತಾವರೆ ಮಾತ್ರ ಗೊತ್ತಿರುವುದು. ಎಲ್ಲಾ ನೈಜ ಕಾಂಗ್ರೆಸ್ ಓಟು ಬಿಜೆಪಿಗೆ ಬರುವುದು ಖಚಿತ ಎಂದು ಭಟ್ ಹೇಳಿದರು. ಮಧ್ವರಾಜ್ ಮತದಾರರನ್ನು ಗೊಂದಲಕ್ಕೆ ತಳ್ಳಿದ್ದಾರೆ. ಚುನಾವಣೆ ನಂತರ ಪ್ರಮೋದ್ ಏನು ಮಾಡ್ತಾರೆ? ಅದೇ ಎರಡು ಚಿಹ್ನೆಯ ಶಾಲು ಹಾಕಿಕೊಂಡು ಓಡಾಡುತ್ತಾರಾ? ಈ ಬಗ್ಗೆ ಸ್ಪಷ್ಟಪಡಿಸಲಿ ಎಂದು ಸಾವಲು ಹಾಕಿದರು. ಬಳಿಕ ಫಲಿತಾಂಶ ಬಂದು 24 ಗಂಟೆಯೂ ರಾಜ್ಯ ಸರ್ಕಾರ ಉಳಿಯುವುದಿಲ್ಲ ಎಂದು ಶಾಸಕ ರಘುಪತಿ ಭಟ್ ಭವಿಷ್ಯ ನುಡಿದರು.

ಬಳಿಕ ಕರಾವಳಿ ಮತದಾರರಿಗೆ ತಿಳುವಳಿಕೆ ಇಲ್ಲ ಎಂದಿರುವ ಸಿಎಂ ಕ್ಷಮೆ ಕೇಳಬೇಕು. ಕರಾವಳಿಗೆ ಅತ್ಯಂತ ಅನ್ಯಾಯ ಮಾಡಿದ್ದು ಜೆಡಿಎಸ್- ಕಾಂಗ್ರೆಸ್ ಸರ್ಕಾರ. ಸಿಎಂ ಕೂಡಲೇ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಕರಾವಳಿ ಜನ ಈ ಬಾರಿ ಸರಿಯಾದ ಬುದ್ಧಿ ಕಲಿಸುತ್ತಾರೆ ಎಂದರು. ಅಷ್ಟೇ ಅಲ್ಲದೆ ಸಿಎಂಯಿಂದ ಕ್ಷಮೆ ಕೇಳಿಸುವ ಜವಾಬ್ದಾರಿ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮೇಲಿದೆ ಎಂದರು.

ಉಡುಪಿಯಲ್ಲಿ 40 ಸಾವಿರ ಬಿಜೆಪಿಗೆ ಲೀಡ್:
ಬಿಜೆಪಿಗೆ ಉಡುಪಿಯಲ್ಲಿ 40 ಸಾವಿರ ಮತಗಳ ಮುನ್ನಡೆ ಕೊಡುವ ಟಾರ್ಗೆಟ್ ಇದೆ. ನನಗೆ ನಾನೇ ಟಾರ್ಗೆಟ್ ಕೊಟ್ಟುಕೊಂಡಿದ್ದೇನೆ ಎಂದು ಶಾಸಕ ರಘುಪತಿ ಭಟ್ ಹೇಳಿದರು. ನನಗೂ ಶೋಭಾ ಕರಂದ್ಲಾಜೆಗೂ ಅಸಮಾಧಾನ ಇಲ್ಲ. ಸಣ್ಣಪುಟ್ಟ ಅಸಮಾಧಾನ ಇದ್ದಾಗ ಮಾತಾಡಿ ಸರಿ ಮಾಡಿಕೊಂಡಿದ್ದೇವೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತೇನೆ ಎಂದರು. ಉಡುಪಿ ಚಿಕ್ಕಮಗಳೂರಿನ 8 ಕ್ಷೇತ್ರದಲ್ಲಿ ಅತೀ ಹೆಚ್ಚು ಲೀಡ್ ಉಡುಪಿಯಲ್ಲಿ ಕೊಡುತ್ತೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *