ಧನುಷ್ ವಿರುದ್ಧ ಠಾಣೆ ಮೆಟ್ಟಿಲೇರಿದ ಸಾಮಾಜಿಕ ಕಾರ್ಯಕರ್ತೆ

Public TV
1 Min Read

ಕಾಲಿವುಡ್ ಸ್ಟಾರ್ ಧನುಷ್ ಮೇಲೆ ಅಭಿಮಾನಿಗಳು ಫುಲ್ ಆಗಿದ್ದಾರೆ. ಧನುಷ್ ನಟನೆಯ `ತಿರುಚಿತ್ರಂಬಲಂ’ ಚಿತ್ರದ `ಥಾಯ್ ಕೆಲ್ವೈ’ ಸಾಂಗ್ ರಿಲೀಸ್ ಆಗಿದ್ದು, ನಟ ಧನುಷ್ ಸಾಹಿತ್ಯ ಬರೆದು, ಹಾಡಿದ್ದಾರೆ. ಈಗ ಧನುಷ್ ಬರೆದಿರುವ ಸಾಹಿತ್ಯಕ್ಕೆ ಸಾಮಾಜಿಕ ಕಾರ್ಯಕರ್ತೆ ಫುಲ್ ಗರಂ ಆಗಿದ್ದಾರೆ.

ನಟ ಧನುಷ್ ಈಗ ಕಾಲಿವುಡ್ ಮತ್ತು ಹಾಲಿವುಡ್ ಚಿತ್ರರಂಗದಲ್ಲಿ ಬೇಡಿಕೆಯಿರುವ ನಟ. ಸದ್ಯ `ತಿರುಚಿತ್ರಂಬಲಂ’ ಸಿನಿಮಾದ ಮೂಲಕ ಸೌಂಡ್ ಮಾಡ್ತಿದ್ದಾರೆ. ಮಿತ್ರನ್ ಜವಾಹರ್ ನಿರ್ದೇಶನದ ಈ ಚಿತ್ರದಲ್ಲಿ ನಟನೆಯ ಜತೆ `ಥಾಯ್ ಕೆಲ್ವೈ’ ಹಾಡಿಗೆ ಸಾಹಿತ್ಯ ಕೂಡ ನಟ ಧನುಷ್ ಬರೆದಿದ್ದಾರೆ. ಅದೇ ಈಗ ಧನುಷ್‌ಗೆ ಮುಳುವಾಗಿದೆ.

`ತಿರುಚಿತ್ರಂಬಲಂ’ ಚಿತ್ರವು ಮ್ಯೂಸಿಕ್ ಲವ್‌ಸ್ಟೋರಿಯಾಗಿದೆ. ಚಿತ್ರದಲ್ಲಿ ಧನುಷ್, ನಿತ್ಯ ಮೆನನ್, ರಾಶಿ ಖನ್ನಾ ನಟಿಸಿದ್ದಾರೆ. ನಾಯಕನಾಗಿ ಕಾಣಿಸಿಕೊಳ್ಳುವುದರ ಜತೆಗೆ `ಥಾಯ್ ಕೆಲ್ವೈ’ ಸಾಹಿತ್ಯ ಬರೆದು ಹಾಡಿದ್ದಾರೆ. ಚಿತ್ರಕ್ಕೆ ಅನಿರುದ್ಧ ರವಿಚಂದರ್‌ ಸಂಗೀತ ಸಂಯೋಜನೆಯಿದೆ. ಈ ಹಾಡು ಕೂಡ ಸಿಕ್ಕಾಪಟ್ಟೆ ಹಿಟ್ ಆ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಹಾಡಿನ ಸಾಹಿತ್ಯವನ್ನು ಬದಲಿಸಿ ಎಂದು ಚಿತ್ರತಂಡದ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ:ತಮಿಳು ಸಿನಿಮಾ ಮಾಡ್ತಾರಾ ಅಥವಾ ಕನ್ನಡದ ನಿರ್ದೇಶಕನಿಗೆ ಮಣೆ ಹಾಕ್ತಾರಾ ಯಶ್?

ಹಾಡಿನ ಸಾಹಿತ್ಯವು ತಮಾಷೆಯಾಗಿ ಕಂಡು ಬಂದರೂ ಅದರ ಕೆಲವು ಪದಗಳು ಹಿರಿಯರಿಗೆ ಅಗೌರವ ತರುವಂತಹ ಪದವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಹಾಡಿನ ಸಾಹಿತ್ಯ ಬದಲಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಆಗಸ್ಟ್ 18ರಂದು ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ರಿಲೀಸ್‌ಗೂ ಮುಂಚೆನೇ ಈ ವಿವಾದವನ್ನ ಬಗೆಹರಿಸಿಕೊಳ್ಳತ್ತಾರಾ ಅಂತಾ ಕಾದುನೋಡಬೇಕಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *