ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಹಾವಳಿ ಮಿತಿಮೀರಿದೆ. ಬುಧವಾರ ರಾತ್ರಿ ಡಾ.ರಾಜ್ಕುಮಾರ್ ರಸ್ತೆಯಲ್ಲಿರುವ ಎಸ್ಎಸ್ ಬಾಯ್ಸ್ ಪಿಜಿಯಲ್ಲಿ ಕಳ್ಳತನ ನಡೆದಿದೆ.
ಮಧ್ಯರಾತ್ರಿ ಪಿಜಿಗೆ ನುಗ್ಗಿದ ಖದೀಮ ರೂಂನಲ್ಲಿದ್ದ ಮೊಬೈಲ್, ಲ್ಯಾಪ್ಟಾಪ್ ಕದ್ದು ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದೆ. ಪ್ರಶಾಂತ್ ಎಂಬವರಿಗೆ ಸೇರಿದ 16 ಸಾವಿರ ಮೌಲ್ಯ ವಸ್ತುಗಳು ಕಳವಾಗಿದ್ದು, ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತ ಅತ್ತಿಬೆಲೆಯಲ್ಲಿ ಗುರುವಾರ 10 ರಿಂದ 15 ಜನ ದರೋಡೆಕೋರರು ರಿಯಲ್ ಎಸ್ಟೇಟ್ ಉದ್ಯಮಿ ಮನೆಗೆ ನುಗ್ಗಿ ರಾಬರಿ ಮಾಡಿದ್ದಾರೆ. ಉದ್ಯಮಿ ನಾಗರಾಜ್ ರೆಡ್ಡಿ ತಲೆಗೆ ಗನ್ ಇಟ್ಟು ತಲೆಗೆ ಗನ್ ಇಟ್ಟು, 2 ಲಕ್ಷ ನಗದು, ಚಿನ್ನಾಭರಣ, ಭೂ ದಾಖಲೆಗಳು ದೋಚಿ ಪರಾರಿಯಾಗಿದ್ದಾರೆ.
ದರೋಡೆಕೋರರ ಗುಂಪು ಪಪ್ಪು ಯಾದವ್ ಹಾಗೂ ರವಿ ಪೂಜಾರಿ ಹೆಸರು ಹೇಳಿದ್ದು ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ.