ಮಲಗಿದ್ದವನ ಎಬ್ಬಿಸಿ ಮಂತ್ರಿ ಮಾಡಿ, ಡಿಸಿಎಂ ಸ್ಥಾನ ಕೊಟ್ರು: ಲಕ್ಷ್ಮಣ ಸವದಿ

Public TV
1 Min Read

ಬಾಗಲಕೋಟೆ: ನಾನು ಮಂತ್ರಿ ಆಗಬೇಕು ಎಂದು ಆಸೆ ಪಟ್ಟಿರಲಿಲ್ಲ. ಆದರೆ ರಾತ್ರಿ ಮಲಗಿದ್ದವನನ್ನು ಫೋನ್ ಮಾಡಿ ಎಬ್ಬಿಸಿ ಡಿಸಿಎಂ ಸ್ಥಾನ ಕೊಟ್ಟರು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಭಾನುವಾರ ರಾತ್ರಿ ರಬಕವಿ-ಬನಹಟ್ಟಿ ತಾಲೂಕಿನ ಹಳಂಗಳಿ ಭದ್ರಗಿರಿ ಬೆಟ್ಟದ ದೀಪೋತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಸವದಿ ಈ ಹೇಳಿಕೆ ಕೊಟ್ಟಿದ್ದಾರೆ. ನಾನು ಮಂತ್ರಿ ಆಗಬೇಕು ಎಂದು ಆಸೆ ಪಟ್ಟಿರಲಿಲ್ಲ. ನಾನು ಮಂತ್ರಿ ಆಗುತ್ತೇನೆ ಅಂತನೂ ಗೊತ್ತಿರಲಿಲ್ಲ. ಆದರೆ ತಡರಾತ್ರಿ ಎರಡು ಗಂಟೆಗೆ ಫೋನ್ ಮಾಡಿ ಎಬ್ಬಿಸಿ ಮಂತ್ರಿ ಮಾಡಿದರು ಎಂದು ತಿಳಿಸಿದರು.

ಲಕ್ಷ್ಮಣ ಸವದಿ ಹಿಂದಿನ ಚುನಾವಣೆಯಲ್ಲಿ ಸೋತಿದ್ದರು ಅನೇಕರು ಹೇಳುತ್ತಾರೆ. ಸೋತೋರು ಹೇಗೆ ಮಂತ್ರಿ, ಉಪಮುಖ್ಯಮಂತ್ರಿ ಆದರು ಎಂದು ಅನೇಕರು ಆಶ್ಚರ್ಯವನ್ನೂ ಪಟ್ಟಿದ್ದರು. ಈ ಬಗ್ಗೆ ಅನೇಕ ಪತ್ರಕರ್ತರು ನನ್ನ ಬಳಿ ಕೇಳಿದ್ದರು, ಸೋತು ಹೇಗೆ ಮಂತ್ರಿ ಆದರಿ ಎಂದು ಪ್ರಶ್ನಿಸಿದ್ದರು. ಆಗ ಹರ ಮುನಿದರು ಗುರು ಕಾಯುವನು ಎಂದಿದ್ದೆ. ರಾಜಕಾರಣಿಗಳಿಗೆ ಹರ ಅಂದರೆ ಮತದಾರರು ದೇವರು ಅಂತ ಭಾವನೆ. ದೇವರು(ಮತದಾರರು) ಈ ಸಲ ಮುನಿಸಿಕೊಂಡರು. ಆದ್ರೆ, ಕೈಹಿಡಿದು ಎತ್ತಿದವರು ಗುರುಗಳು(ವಿವಿಧ ಮಠಾಧೀಶರು, ಮಹಾತ್ಮರು). ಅವರ ಆಶೀರ್ವಾದದಿಂದ ನಾನು ಸೋತರೂ ಮಂತ್ರಿಯಾಗಿ, ಡಿಸಿಎಂ ಆದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *