ವ್ಯಕ್ತಿತ್ವವನ್ನು ಹಾಳುಮಾಡಬೇಕೆಂದು ಪ್ರಯತ್ನಿಸ್ತಿದ್ದಾರೆ: ಕಣ್ಣೀರಿಟ್ಟ ಶಾಸಕ ಹೆಚ್.ಕೆ ಕುಮಾರಸ್ವಾಮಿ

Public TV
1 Min Read

ಹಾಸನ: ವ್ಯಕ್ತಿತ್ವವನ್ನು ಹಾಳುಮಾಡಬೇಕೆಂದು ಕೆಲವೊಂದನ್ನು ಸೃಷ್ಟಿಸಲಾಗುತ್ತಿದೆ. ಮುಂದೆ ಜನತಾದಳವೇ ಅಧಿಕಾರಕ್ಕೆ ಬರಲಿದೆ ಎಂದು ಆಲೂರು-ಸಕಲೇಶಪುರ-ಕಟ್ಟಾಯ ಶಾಸಕ ಹೆಚ್‌ಕೆ ಕುಮಾರಸ್ವಾಮಿ (HK Kumaraswamy) ಗದ್ಗದಿತರಾಗಿ ಹೇಳಿಕೆ ನೀಡಿದ್ದಾರೆ.

ಶುಕ್ರವಾರ ಹಾಸನದ (Hassan) ಸಕಲೇಶಪುರ ಪಟ್ಟಣದಲ್ಲಿ ನಡೆದ ಜೆಡಿಎಸ್ (JDS) ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ವ್ಯಕ್ತಿತ್ವವನ್ನು ಹಾಳು ಮಾಡಬೇಕೆಂದು ಕೆಲವೊಂದನ್ನು ಕ್ರಿಯೇಟ್ ಮಾಡುತ್ತಿದ್ದಾರೆ. ನಾವೆಲ್ಲಾ ಸೇರಿ ಜನ ಸಂಘಟನೆ ಮಾಡಿ ಜನರಿಗೆ ಪಕ್ಷದ ಕಾರ್ಯಕ್ರಮಗಳನ್ನು ಹೇಳಿ ಗೆಲ್ಲೋಣ ಎಂದರು.

ಮುಂದೆ ಜನತಾದಳವೇ ಅಧಿಕಾರಕ್ಕೆ ಬರಲಿದೆ. ನಮ್ಮ ಅಭಿವೃದ್ಧಿಯನ್ನು ಯಾರು ಕೂಡಾ ನಿಲ್ಲಿಸಲು ಸಾಧ್ಯವಿಲ್ಲ. ನಾವು ಗೆದ್ದೇ ಗೆಲ್ಲುತ್ತೇವೆ ಎನ್ನುವ ಕಾರಣಕ್ಕಾಗಿ ಕೆಲವರು ಕುಚೋದ್ಯವನ್ನು ಶುರು ಮಾಡಿದ್ದಾರೆ. ನಾನು ಇಲ್ಲಿ ಎಲ್ಲವನ್ನೂ ಬಾಯ್ಬಿಟ್ಟು ಹೇಳುವುದಕ್ಕೆ ಆಗುವುದಿಲ್ಲ ಎಂದು ಗದ್ಗದಿತರಾದರು. ಇದನ್ನೂ ಓದಿ: ಕೋಲಾರದಲ್ಲಿ ಸಿದ್ದರಾಮಯ್ಯರನ್ನ ಹಣಿಯಲು ರಣತಂತ್ರ- ದಲಿತರಿಂದ ಕರಪತ್ರ ಹಂಚಿ ಅಭಿಯಾನ

ನಿಮ್ಮ ಕುಮಾರಸ್ವಾಮಿ ಇರಬಾರದು, ಜನತಾದಳ ಗೆಲ್ಲಬಾರದು ಎಂದು 14 ವರ್ಷಗಳ ಹಿಂದೆ ಇದ್ದ ಆರೋಪಗಳನ್ನು ಈಗ ಕೊನೆ ವರ್ಷದಲ್ಲಿ ತೆಗೆಯುತ್ತಿದ್ದಾರೆ. ಏನಾದರೂ ಮಾಡಿ ವ್ಯಕ್ತಿತ್ವಕ್ಕೆ ತೊಡಕು ಮಾಡಬೇಕು, ಪಕ್ಷವನ್ನು ಹಾಳು ಮಾಡಬೇಕು ಎಂದು ಎಲ್ಲಾ ಕ್ರಿಯೇಟ್ ಮಾಡ್ತಾ, ಪ್ರಚೋದನೆ ಕೊಡ್ತಾ ಇದ್ದಾರೆ. ನಮ್ಮ ಕಾರ್ಯಕರ್ತರ ಮನಸ್ಸನ್ನು ಕೆಡಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ದಯವಿಟ್ಟು ಯಾರೂ ಅದಕ್ಕೆ ಬಲಿಯಾಗಬಾರದು ಎಂದು ಎಚ್ಚರಿಕೆ ನೀಡಿದರು.

ನಾವು ಎಂತಹ ಸಂದರ್ಭ ಬಂದರೂ ಮಾನವೀಯತೆಯನ್ನು ಇಟ್ಟುಕೊಂಡು ಪಕ್ಷವನ್ನು ಕಾಪಾಡಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಕಾಯ, ವಾಚ, ಮನಸ ನಾವು ಕೆಲಸ ಮಾಡ್ತಾ ಇದ್ದೇವೆ. ನಿಮ್ಮಂತಹ ಕಾರ್ಯಕರ್ತರನ್ನು, ಮುಖಂಡರನ್ನು ಪಡೆದ ನಾವು ಪುಣ್ಯವಂತರು. ಕುಮಾರಸ್ವಾಮಿ ಮುಖ್ಯ ಅಲ್ಲ, ಇಲ್ಲಿ ಪಕ್ಷ ಮುಖ್ಯ. ಗೆಲ್ಲಿಸಿಕೊಡಿ, ಆಡಳಿತ ಕೈಗೆ ಕೊಡಿ ಖಂಡಿತ ಜನರ ಸೇವೆ ಮಾಡುವುದಕ್ಕೆ ಬದ್ಧರಾಗಿದ್ದೇವೆ ಎಂದರು. ಇದನ್ನೂ ಓದಿ: ಪಂಚರತ್ನ ಯಾತ್ರೆಯಲ್ಲಿ ಭಾಗಿಯಾಗಿದ್ದ ಜೆಡಿಎಸ್ ಅಭ್ಯರ್ಥಿ ನಿಧನ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *