ಒಂದೂವರೆ ಎಕರೆ ಜಮೀನಿನಲ್ಲಿ 60ಕ್ಕೂ ಹೆಚ್ಚು ಸಿರಿಧಾನ್ಯಗಳನ್ನು ಬೆಳೆದು ಮಾದರಿಯಾಗಿದ್ದಾರೆ ಕೋಲಾರದ ಮಹಿಳೆ!

Public TV
2 Min Read

ಕೋಲಾರ: ಕೆರೆಗಳ ನಾಡು ಕೋಲಾರದಲ್ಲಿ ಮಳೆಯನ್ನೇ ಆಧರಿಸಿ 60ಕ್ಕೂ ಹೆಚ್ಚು ಸಿರಿಧಾನ್ಯಗಳನ್ನು ಬೆಳೆಯುವ ಮೂಲಕ ಮಹಿಳೆಯೊಬ್ಬರು `ಮಾದರಿ ರೈತ ಮಹಿಳೆ’ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಚಿನ್ನದ ನಾಡು ಕೋಲಾರದಲ್ಲಿ ಆದರ್ಶ ರೈತ ಮಹಿಳೆಯೊಬ್ಬರು ಸುಮಾರು 60 ವರ್ಷಗಳಿಂದ ಸಿರಿಧಾನ್ಯಗಳನ್ನು ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ತೊಂಡಹಳ್ಳಿ ಗ್ರಾಮದ ರಾಜಮ್ಮ ಈ ಆದರ್ಶ ಮಹಿಳೆ.

ಕೋಲಾರದಲ್ಲಿ ಮಳೆಯ ಪ್ರಮಾಣ ಅಷ್ಟೇನೂ ಹೇಳಿಕೊಳ್ಳುವಂಥದ್ದೇನಲ್ಲ. ಮುಂಗಾರು ಮಳೆಯನ್ನೇ ಆಧರಿಸಿ ರೈತ ಮಹಿಳೆ ರಾಜಮ್ಮ, ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ 60 ವರ್ಷಗಳಿಂದ ಸುಮಾರು 50 ರಿಂದ 60 ರೀತಿಯ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದಾರೆ.

ತಮ್ಮ ದೈನಂದಿನ ಬದುಕಿಗೆ ಬೇಕಾದ ರಾಗಿ, ಜೋಳ, ಅವರೆ, ಗೊಂಗುರು, ಬುಷ್ ಬಿನ್ಸ್, ಚಿಕ್ಕಕುಂಬಳಕಾಯಿ, ಕೆಂಪುಮುದ್ರೆ ಜೋಳ, ಹಳಸಂದ್ರ, ಸಾಮೆ, ಕಪ್ಪು ಸಾಮೆ, ಔಡಲ ಬೀಜ, ಬರುಗು ಸಾಮಿ, ಕಾಕಿ ಜೋಳ, ಕಿರು ಹಳೆಸಂದ್ರೆ, ತಬೆ ಬೀಜ, ನುಗ್ಗೆಬೀಜ, ಅವರೆ ಬೀಜ, ಸಚೆ ಬೀಜ, ಬಿಳಿ ನವೆ, ಊದಲು ಬೀಜ,ಕೆಂಪು ನವಣೆ, ಎಳ್ಳು, ರಾಗಿ ಬೀಳು, ಗಿಡ್ಡ ರಾಗಿ, ಬೀಟ್ರೋರಟ್, ಅರಿಸಿನ, ಟಮೋಟೊ, ಸೌತೆಕಾಯಿ, ಅರಿಸಿನ ಮೂಲಂಗಿ, ಈರುಳ್ಳಿ, ಬದನೆ, ಮುಸುಕ ಬದನೆ, ಕ್ಯಾರೆಟ್, ಕಡ್ಡಿ ಮೆಣಸಿನಕಾಯಿ, ಕೆಂಪು ಮೂಲಂಗಿ, ರಾಜಾಮ್ ಬೀಜ, ಮೆಂಥ್ಯ್ ಸೋಪ್ಪು, ತಂಬೂರಿ ಸೊರೆಕಾಯಿ ಕ್ಯಾರೆಟ್, ಉದ್ದ ಕುಂಬಳಕಾಯಿ, ಸೊರೆಬೀಜ, ಜೋಳ, ಬೀಳಿಬಿನ್ಸ್, ಸಾಮಿ, ಉದ್ದಲಬೀಜ, ಚಟ್ನಿ ಎಳ್ಳು ಸೇರಿದಂತೆ ಹಲವಾರು ಬಗೆಯ ಸಿರಿಧಾನ್ಯಗಳನ್ನು ಬೆಳೆಯುತ್ತಾರೆ.

ತಮ್ಮ ಕುಟುಂಬಕ್ಕೆ ಬೇಕಾದಷ್ಟು ಸಿರಿಧಾನ್ಯಗಳನ್ನು ಬೆಳೆಯುತ್ತಾ ವರ್ಷವಿಡೀ ತಮ್ಮ ಜೀವನ ನಡೆಸುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯ ಅಂದ್ರೆ ಇವರು ಸಾವಯವ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಹೊಲಕ್ಕೆ ರಾಸಾಯನಿಕ ಗೊಬ್ಬರವನ್ನು ಬಳಸದೇ ಕೊಟ್ಟಿಗೆ ಗೊಬ್ಬರವನ್ನೇ ಬಳಸಿ ಆರೋಗ್ಯಕರ ಕೃಷಿ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ. ಇದರಿಂದ ಇವರು ಮಾಡುವ ಕೃಷಿಯು ಅಕ್ಕಪಕ್ಕದ ರೈತರಿಗೂ ಮಾದರಿಯಾಗಿದೆ.

ಈಗಾಗಲೇ ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ಭೂಮಿ ಶುಚಿಗೊಳಿಸುವುದರಿಂದ ಹಿಡಿದು ಬಿತ್ತನೆವರೆಗೆ ಎಲ್ಲಾ ಕಾರ್ಯಗಳು ಪ್ರಾರಂಭಗೊಂಡಿವೆ. ಇನ್ನು ರೈತರಿಗೆ ಇದು ಪಕ್ಕಾ ಪರ್ವಕಾಲ. ಬಿತ್ತನೆ ಕಾರ್ಯ ಪೂರ್ಣಗೊಂಡು ಚೆನ್ನಾಗಿ ಬೆಳೆ ಬಂದರೆ ವರ್ಷವಿಡೀ ಆನಂದದಿಂದ ಊಟ ಮಾಡಬಹುದು ಎನ್ನುವ ಭಾವನೆ ಅವರದ್ದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *