ದೇವಸ್ಥಾನ ಸುತ್ತಲೂ ಆವರಿಸಿದ ನೀರು: ಕ್ಷೇತ್ರದಿಂದ ಹೊರ ಬರಲ್ಲ ಅಂತಾ ಪಟ್ಟು ಹಿಡಿದ ಸ್ವಾಮೀಜಿ

Public TV
1 Min Read

ಮಂಡ್ಯ: ಕಾವೇರಿ ನದಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ದೇವಸ್ಥಾನದಿಂದ ಹೊರಬರುವಂತೆ ಜಿಲ್ಲಾಧಿಕಾರಿ ಮನವಿ ಮಾಡಿಕೊಂಡರೂ ಸ್ವಾಮೀಜಿಯೊಬ್ಬರು ಇದಕ್ಕೆ ಒಪ್ಪದೇ ಅಲ್ಲಿಯೇ ಕುಳಿತಿದ್ದಾರೆ.

ಕಾವೇರಿ ನದಿ ಪಾತ್ರದ ಶ್ರೀರಂಗಪಟ್ಟಣದ ಗೌತಮ ಕ್ಷೇತ್ರ ದೇವಸ್ಥಾನ ಈಗಾಗಲೇ ನದಿ ಪ್ರವಾಹದಿಂದ ಅರ್ಧ ಮುಳುಗಡೆಯಾಗಿದೆ. ಮತ್ತೇ ಕೆಆರ್‌ಎಸ್‌ ಡ್ಯಾಂ ನಿಂದ 1 ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ದೇವಸ್ಥಾನವೇ ಮುಳುಗಡೆ ಆಗುತ್ತದೆ. ಹೀಗಾಗಿ ಜಿಲ್ಲಾಧಿಕಾರಿ ಮಂಜುಶ್ರೀ ಸ್ಥಳಕ್ಕೆ ಭೇಟಿ ನೀಡಿ, ಸ್ವಾಮೀಜಿಗಳಿಗೆ ಕರೆ ಮಾಡಿ ದೇವಸ್ಥಾನ ಬಿಟ್ಟು ಬರುವಂತೆ ಮನವಿ ಮಾಡಿಕೊಂಡಿದ್ದಾರೆ.

ನೀರು ಬಂದರೂ ನಮಗೆನೂ ಆಗಲ್ಲ. ನಾನು ಗೌತಮ ಕ್ಷೇತ್ರದಿಂದ ಹೊರ ಬರುವುದಿಲ್ಲ ಎಂದು ಸ್ವಾಮೀಜಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸ್ವಾಮೀಜಿಯ ಯೋಗಕ್ಷೇಮ ವಿಚಾರಿಸಿದ ಮಂಜುಶ್ರೀ ಅವರು, ನೀರಿನ ಮಟ್ಟ ಹೆಚ್ಚಾಗಿ ನೀವು ತೊಂದರೆಗೆ ಒಳಗಾಗುತ್ತಿದ್ದಂತೆ ತಿಳಿಸಿ, ನಾವು ನಿಮ್ಮನ್ನು ಬೋಟ್‍ನಲ್ಲಿ ಕರೆದು ತರುತ್ತೇವೆ ಎಂದು ಸಲಹೆ ನೀಡಿದ್ದಾರೆ.

ಬಳಿಕ ಸ್ಥಳೀಯ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಯಾವುದೇ ಅವಘಡ ಸಂಭವಿಸದಂತೆ ಎಚ್ಚರವಹಿಸಿ ಎಂದು ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *