ಹುಂಡಿ ಕಳ್ಳತನಕ್ಕೆ ಯತ್ನಿಸಿದ ಖದೀಮರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

Public TV
1 Min Read

ತುಮಕೂರು: ದೇವಸ್ಥಾನದ ಹುಂಡಿ ಕಳ್ಳತನ ಮಾಡಲು ಯತ್ನಿಸುತಿದ್ದ ಕಳ್ಳರನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ತಿಪಟೂರು ತಾಲೂಕಿನ ಬಿದರೆಗುಡಿಯ ಬಿದರಾಂಬಿಕಾ ದೇವಸ್ಥಾನದ ಹುಂಡಿ ಕದಿಯಲು ಹೊಂಚು ಹಾಕುತಿದ್ದಾಗ ಕಳ್ಳರು ಗ್ರಾಮಸ್ಥರ ಕೈಗೆ ಸಿಕ್ಕಿಬಿದಿದ್ದಾರೆ. ಚನ್ನರಾಯಪಟ್ಟಣದ ಹಿರಿಸಾವೆಯ ಮೂಲದವರಾದ ನಿಖಿಲ್ ಮತ್ತು ಲಯನ್‍ನನ್ನು ಗ್ರಾಮಸ್ಥರು ದೇವಸ್ಥಾನದ ಕಂಬಕ್ಕೆ ಕಟ್ಟಿಹಾಕಿ ಛೀಮಾರಿ ಹಾಕಿದ್ದಾರೆ.

ಬಳಿಕ ಹೊನವಳ್ಳಿ ಪೊಲೀಸರಿಗೆ ಕಳ್ಳರನ್ನು ಒಪ್ಪಿಸಿದ್ದಾರೆ. ಈ ನಡುವೆ ಮತ್ತೊಬ್ಬ ಕಳ್ಳ ನರಸಿಂಹ ಮೂರ್ತಿ ಎಂಬಾತ ಪರಾರಿಯಾಗಿದ್ದಾನೆ. ಇವರು ವೃತ್ತಿಪರ ಕಳ್ಳರಾಗಿದ್ದು ಬ್ಯಾಗಲ್ಲಿ ಎಕ್ಸೆಲ್ ಬ್ಲೇಡ್ ಸೇರಿದಂತೆ ಬೀಗ ಮುರಿಯುವ ಹಲವು ಆಯುಧಗಳು ಪತ್ತೆಯಾಗಿವೆ. ಈ ಸಂಬಂಧ ಹೊನ್ನಾವಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *