ಕೇಂದ್ರದ ಸ್ವಚ್ಛ ಸಾಂಪ್ರದಾಯಿಕ ಸ್ಥಳಗಳ ಯೋಜನೆಯ ಪಟ್ಟಿಯಲ್ಲಿ ಮಂತ್ರಾಲಯ, ಶಬರಿಮಲೆ

Public TV
2 Min Read

ನವದೆಹಲಿ: ಕೇರಳದ ಪ್ರಖ್ಯಾತ ಶಬರಿಮಲೆ ಹಾಗೂ ಆಂಧ್ರ ಪ್ರದೇಶದ ರಾಘವೇಂದ್ರ ಸ್ವಾಮಿ ದೇವಸ್ಥಾನವನ್ನು ಸ್ವಚ್ಛ ಸಾಂಪ್ರದಾಯಿಕ ಸ್ಥಳಗಳಾಗಿ ಗುರುತಿಸಲಾಗಿದೆ.

ಸಾಂಪ್ರದಾಯಿಕ ಸ್ಥಳಗಳಲ್ಲಿ ಶುಚಿತ್ವ ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಸ್ವಚ್ಛ ಸಾಂಪ್ರದಾಯಿಕ ಸ್ಥಳಗಳು( ಸಿಪ್) ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಸಿಪ್ ಸ್ವಚ್ಛ ಭಾರತ ಅಭಿಯಾನದ ಭಾಗವಾಗಿದೆ. ಯೋಜನೆಯ ಮೂರನೇ ಹಂತದಲ್ಲಿ ಆಯ್ಕೆಯಾಗಿರುವ 10 ಸ್ಥಳಗಳಲ್ಲಿ ಶಬರಿಮಲೆ, ಮಂತ್ರಾಲಯ ಸ್ಥಾನವನ್ನು ಪಡೆದಿದೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

2016ರಲ್ಲಿ ಯೋಜನೆ ಶುರುವಾಗಿದ್ದು ಮೊದಲ ಹಂತದಲ್ಲಿ ರಾಜಸ್ಥಾನದ ಅಜ್ಮೀರ್ ದರ್ಗಾ, ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್, ಪಂಜಾಬ್ ನ ಗೋಲ್ಡನ್ ಟೆಂಪಲ್ ಗಳಲ್ಲಿ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ. ಎರಡನೇ ಹಂತದಲ್ಲಿ ಮಧ್ಯಪ್ರದೇಶದ ಮಹಾಕಾಲೇಶ್ವರ್, ತೆಲಂಗಾಣದ ಚಾರ್ ಮಿನಾರ್ ಗಳಲ್ಲಿ ಯೋಜನೆ ಪೂರೈಸಿದ್ದು ಮೂರನೇ ಹಂತವನ್ನು ಉತ್ತರಾಖಂಡ್ ನ ಬದರೀನಾಥದಲ್ಲಿ ಶುರು ಮಾಡಲಾಗಿದೆ.

ಪ್ರವಾಸಿ ಸ್ಥಳಗಳು ಆಗಿರುವುದರಿಂದ ಎಷ್ಟು ಸಾಧ್ಯವೋ ಅಷ್ಟು ಸ್ಥಳಗಳನ್ನು ಯೋಜನೆಯಲ್ಲಿ ಸೇರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸ್ವಚ್ಛವಾಗಿದ್ದಷ್ಟು ಹೆಚ್ಚು ಪ್ರವಾಸಿಗರನ್ನು ಸ್ಥಳಗಳು ಸೆಳೆಯುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯೋಜನೆಗೆ 2016ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದರು. ಕೇಂದ್ರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಜೊತೆ ಸೇರಿ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿದೆ.

ಮೊದಲ ಹಂತದಲ್ಲಿ ಆಯ್ಕೆಗೊಂಡ ಸ್ಥಳಗಳಲ್ಲಿ ಗುಣಾತ್ಮಕ ಕ್ರಮಗಳನ್ನು ತೆಗೆದುಕೊಂಡು ಒಳಚರಂಡಿ ಮೂಲಸೌಕರ್ಯ, ತ್ಯಾಜ್ಯ ನಿರ್ವಹಣೆ, ಶುದ್ಧ ನೀರು ಘಟಕಗಳು, ಸಾರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾಗಿರುವುದನ್ನು ಪರಿಶೀಲಿಸಿದ್ದೇವೆ. ಎರಡನೇ ಹಂತದ ಸ್ಥಳಗಳ ಪರಿಶೀಲನೆಯನ್ನು ಮುಂದಿನ ತಿಂಗಳು ಮಾಡಲಿದ್ದೇವೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಕಾರ್ಯದರ್ಶಿ ಪರಮೇಶ್ವರನ್ ಅಯ್ಯರ್ ತಿಳಿಸಿದ್ದಾರೆ.

ಮೂರನೇ ಹಂತದಲ್ಲಿ ಪಶ್ಚಿಮ ಬಂಗಾಳ ಹಜಾಡ್ರ್ವಾರಿ ಅರಮನೆ, ಹರಿಯಾಣದ ಬ್ರಹ್ಮ ಸರೋವರ್, ಉತ್ತರ ಪ್ರದೇಶದ ವಿದುರ್ ಕುಟಿ, ಉತ್ತರಾಖಂಡ್‍ದ ಮನ ಗ್ರಾಮ, ಜಮ್ಮು ಮತ್ತು ಕಾಶ್ಮೀರದ ಪಾಂಗೊಂಗ್ ಸರೋವರ, ಉತ್ತರ ಪ್ರದೇಶದ ನಾಗವಾಸುಕಿ ದೇವಸ್ಥಾನ, ಮಣಿಪುರದ ಇಮಾಕೀಥಲ್ ಮಾರುಕಟ್ಟೆ ಹಾಗೂ ಉತ್ತರಾಖಂಡ್ ನ ಕನ್ವಾಶ್ರಮ್‍ವು ಸೇರಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *