ಕಾಡುಬಿಟ್ಟು ನಾಡಿಗೆ ಬಂತು ಚಿರತೆ ಹಿಂಡು: ಆತಂಕದಲ್ಲಿದ್ದಾರೆ ಹೊನ್ನಾಳಿ ಸುತ್ತಮುತ್ತಲಿನ ಗ್ರಾಮಸ್ಥರು!

Public TV
0 Min Read

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಯರಲಬನ್ನಿ ಕೋಡು ಗ್ರಾಮದಲ್ಲಿ ಚಿರತೆಯ ದಂಡು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕವುಂಟು ಮಾಡಿದೆ.

ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ 2 ಚಿರತೆ ಹಾಗೂ ಅವುಗಳ ಮರಿಗಳು ಪ್ರತ್ಯಕ್ಷವಾಗಿದ್ದು, ಕೂಲಂಬಿ-ಹೊನ್ನಾಳಿ ಮಾರ್ಗದಲ್ಲಿ ಸುತ್ತುಮುತ್ತಲಿನ ಭತ್ತದ ಗದ್ದೆಗಳಲ್ಲಿವೆ ಎಂದು ಶಂಕೆ ವ್ಯಕ್ತವಾಗಿದೆ.

ಕಳೆದು ಎರಡ್ಮೂರು ದಿನಗಳಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಅವುಗಳನ್ನು ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದು, ಗದ್ದೆಗಳಲ್ಲಿ ಭತ್ತದ ಹುಲ್ಲು ಹೊದಿಸಿ ಬೋನುಗಳನ್ನು ಇಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *