ಪರಿಸರ ಉಳಿಸೋಕೆ ಕೊಪ್ಪಳ ಗೆಳೆಯರ ಬಳಗದಿಂದ ಮಹತ್ವದ ಕಾರ್ಯ!

Public TV
1 Min Read

ಕೊಪ್ಪಳ: ಪರಿಸರ ದಿನಾಚರಣೆ ದಿನ ಒಂದು ಸಸಿ ನೆಟ್ಟು ಫೋಟೋಗೆ ಫೋಸ್ ಕೊಟ್ಟು ಕೆಲವರು ಸುಮ್ನಾಗ್ಬಿಡ್ತಾರೆ. ಆದ್ರೆ ಈ ಗೆಳೆಯರ ಬಳಗ ಪರಿಸರ ಉಳಿಸೋಕೆ ಬೆಳೆಸೋಕೆ ಪರಿಸರ ದಿನಾಚರಣೆ ಅಗತ್ಯವಿಲ್ಲಾ ಎನ್ನುವಂತೆ ಕೆಲಸ ಮಾಡ್ತಿದೆ.

ಹೌದು. ಕೊಪ್ಪಳದ ಗಂಗಾವತಿಯಲ್ಲಿ ಈ ಗೆಳೆಯರ ಬಳಗದ ಕೆಲಸ ಇದೀಗ ಎಲ್ಲರ ಗಮನ ಸೆಳೆದಿದೆ. ಪ್ರತೀ ದಿನ ಗೆಳೆಯರೆಲ್ಲಾ ಒಂದು ಕಡೆ ಸೇರಿ ಟೀ ಕುಡಿದು ಮಾತಾಡಿ ಟೈಮ್ ಪಾಸ್ ಮಾಡಿ ಹೋಗ್ತಿದ್ದರು ಅಂತಾ ಎಲ್ಲರೂ ಅನ್ಕೊಂಡಿದ್ರು. ಆದ್ರೆ ಇವತ್ತು ಇವರು ಮಾಡಿದ ಈ ಕೆಲಸ ಎಲ್ಲರ ಮೆಚ್ಚುಗೆ ಗಳಿಸಿದೆ. ಇದನ್ನೂ ಓದಿ: ನಿಸರ್ಗ ರಕ್ಷಣೆಗೆ ಪಣತೊಟ್ಟ ನರಗುಂದ ಯುವಕರು

ಸುಮ್ನೆ ಕೂತ್ಕೊಂಡು ಟೈಮ್ ಪಾಸ್ ಮಾಡಿ ಮನೆಗೆ ಹೋಗುವುದಕ್ಕಿಂತ ಏನಾದ್ರೂ ಮಾಡ್ಬೇಕು ಅಂತಾ ಡಿಸೈಡ್ ಮಾಡಿ. ಟೀ ಕುಡಿಯೋಕೆ ಬರುವ ಎಲ್ಲರೂ ಸೇರಿ ಅರಣ್ಯ ಪ್ರದೇಶದಲ್ಲಿ ಬೀಜವನ್ನು ಬಿತ್ತಿ, ಸಸಿ ಬೆಳಸುವ ಕಾರ್ಯವನ್ನು ಮಾಡಲು ಮುಂದಾಗಿದ್ದಾರೆ. ಇಷ್ಟಕ್ಕೂ ಈ ಟೀ ಕುಡಿದು ಟೈಮ್ ಪಾಸ್ ಮಾಡಿ ಹೋಗುತ್ತಿದ್ದವರು ಪೊಲೀಸರು, ಶಿಕ್ಷಕರು, ಪತ್ರಕರ್ತರು, ಸಂಘ ಸಂಸ್ಥೆ ಹೀಗೆ ಹಲವಾರು ಗೆಳೆಯರ ಬಳಗದವರು ಸೇರಿ ಈ ಮಹತ್ವದ ಕೆಲಸವನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ದರ್ಶನ್ ಅಭಿಮಾನಿಗಳು ಗಿಡ ನೆಡೋದರಲ್ಲಿ ಬ್ಯುಸಿ!

ನಾವು ಹಚ್ಚುವ 500 ಬೀಜಗಳಲ್ಲಿ 50 ಆದ್ರೂ ಬೆಳೆದು ಮರವಾದ್ರೆ ಅದೇ ಖುಷಿ ಅಂತ ಅವರು ಹೇಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *