ಶಾನುಭಾಗ್ ಹೇಳುವ ರೀತಿಯಲ್ಲಿ ಸರ್ಕಾರ ಕೆಲಸ ಮಾಡಲು ಸಾಧ್ಯವಿಲ್ಲ: ಸಚಿವ ಪ್ರಮೋದ್ ಮಧ್ವರಾಜ್

Public TV
1 Min Read

ಉಡುಪಿ: ಕನ್ನಡ ರಾಜೋತ್ಸವ ಪ್ರಶಸ್ತಿಯನ್ನು ತಿರಸ್ಕರಿಸಿದ ಸಮಾಜ ಸೇವಕ- ಮಾನವ ಹಕ್ಕುಗಳ ಹೋರಾಟಗಾರ, ಪಬ್ಲಿಕ್ ಹೀರೋ ಡಾ. ರವೀಂದ್ರನಾಥ ಶಾನುಭಾಗ್ ಅವರ ಬಗ್ಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಲಘುವಾಗಿ ಮಾತನಾಡಿದ್ದಾರೆ.

ಶಾನುಭಾಗ್ ಅವರು ತಮ್ಮ ಸಮಾಜ ಸೇವ ಕಾರ್ಯಗಳು ನಿರಿಕ್ಷೀತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಮಕ್ಕಳೂ ಹಿರಿಯ ನಾಗರೀಕರು ಇಂದಿಗೂ ತಮ್ಮ ಅಸಹಾಯಕತೆಯಿಂದ ನನ್ನ ಬಳಿ ಬರುತ್ತಾರೆ. ಸರ್ಕಾರವು ತನ್ನ ಕಾರ್ಯವನ್ನು ಸರಿಯಾಗಿ ನಡೆಸಿಲ್ಲ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ, ರಾಜ್ಯಸರ್ಕಾರದ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು, ಶಾನುಭಾಗ್ ಹೇಳುವ ಕೆಲಸಗಳನ್ನೆಲ್ಲ ಮಾಡಲು ಸಾಧ್ಯವಿಲ್ಲ. ಶಾನುಭಾಗ್ ಅವರ ವೇಗಕ್ಕೆ ಕೆಲಸ ಮಾಡುವಷ್ಟು ಸ್ಪೀಡ್ ಅಧಿಕಾರಿಗಳು ಮತ್ತು ಸರ್ಕಾರಕ್ಕೆ ಇಲ್ಲ ಅಂತ ಹೇಳುವ ಮೂಲಕ ಸರ್ಕಾರದ ಕೆಲಸ ತುಂಬಾ ನಿಧಾನ ಅಂತ ಒಪ್ಪಿಕೊಂಡರು.

ಅಲ್ಲದೇ ಸರ್ಕಾರ ಕೊಟ್ಟ ಪ್ರಶಸ್ತಿಯನ್ನು ತಿರಸ್ಕರಿಸಿದ್ದು ಅವರ ಗುಣದ ಪ್ರತಿಬಿಂಬ. ಡಾ. ರವೀಂದ್ರನಾಥ್ ಶಾನುಭಾಗ್ ಅವರು ಸ್ವಲ್ಪ ತಾಳ್ಮೆಯನ್ನು ರೂಢಿಸಿಕೊಳ್ಳಬೇಕು ಸಚಿವ ಪ್ರಮೋದ್ ಮಧ್ವರಾಜ್ ಸಲಹೆ ನೀಡಿದರು.

 

Share This Article
Leave a Comment

Leave a Reply

Your email address will not be published. Required fields are marked *