ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಸುಲಿಗೆ ಮಾಡಿದ್ದ ಖದೀಮರ ಬಂಧನ

Public TV
1 Min Read

ಬೆಂಗಳೂರು: ಅಪಘಾತದ ನೆಪ ಮಾಡಿಕೊಂಡು ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವನನ್ನು ಸುಲಿಗೆ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ತಂಡವೊಂದನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಯನಗರದ ಬಿಆರ್ ರಾಹುಲ್ ಗೌಡ ಎಂಬ ವಿದ್ಯಾರ್ಥಿಯನ್ನು ಏಳು ಜನರ ಗ್ಯಾಂಗ್ ವೊಂದು ರಾತ್ರಿ ವೇಳೆಯಲ್ಲಿ ಅಪಹರಣ ಮಾಡಿತ್ತು. ಅಲ್ಲದೇ ರಾತ್ರಿಯಿಡೀ ತಮ್ಮ ಕಾರಿನಲ್ಲಿ ರೌಂಡ್ ಹಾಕಿಸಿ ಚಿತ್ರಹಿಂಸೆ ನೀಡಿದ್ದರು. ಬಳಿಕ ಅವರ ಬಳಿಯಿದ್ದ ಮೊಬೈಲ್, ಪರ್ಸ್ ಹಾಗೂ ಚಿನ್ನದ ಸರವನ್ನು ಕಸಿದುಕೊಂಡಿದ್ದ ದುಷ್ಕರ್ಮಿಗಳು ಬಿಯರ್ ಬಾಟಲ್ ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು.

ಈ ಕುರಿತಂತೆ ರಾಹುಲ್ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಏಳು ಜನರ ತಂಡವನ್ನು ಬಂಧಿಸಿದ್ದಾರೆ. ಮತ್ತು ಪ್ರಕರಣ ಕುರಿತಂತೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *