ನಟಿ ಚಾರ್ಮಿಗಾಗಿ ಪತ್ನಿಯನ್ನೇ ಬಿಡ್ತಾರಾ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್

Public TV
2 Min Read

ಪುನೀತ್ ರಾಜ್ ಕುಮಾರ್ ಅವರನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದ ನಿರ್ದೇಶಕ ಪುರಿ ಜಗನ್ನಾಥ್ ವೈವಾಹಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದೆಯಾ? ಅಂಥದ್ದೊಂದು ಸುದ್ದಿ ತೆಲುಗು ಸಿನಿಮಾ ರಂಗದಿಂದ ಬಂದಿದೆ. ಕಳೆದ ಒಂಬತ್ತು ವರ್ಷಗಳಿಂದ ಪುರಿ ಜಗನ್ನಾಥ್ ನಿರ್ದೇಶನದ ಬಹುತೇಕ ಸಿನಿಮಾಗಳಿಗೆ ಬಂಡವಾಳ ಹೂಡುತ್ತಿರುವ ಖ್ಯಾತ ನಟಿ ಚಾರ್ಮಿ ಕೌರ್, ಈ ಬಿರುಗಾಳಿಗೆ ಕಾರಣ ಎನ್ನಲಾಗುತ್ತಿದೆ. ಕಷ್ಟದ ದಿನಗಳಲ್ಲಿ ಪತಿಯೊಂದಿಗೆ ನಿಂತಿರುವ ಪತ್ನಿಯನ್ನು ಪುರಿ ಅಷ್ಟು ಬೇಗ ದೂರ ಮಾಡುತ್ತಾರಾ ಎನ್ನುವ ಪ್ರಶ್ನೆಯೂ ಎದ್ದಿದೆ.

ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಕಾಂಬಿನೇಷನ್ ನಲ್ಲಿ ಅನೇಕ ಸಿನಿಮಾಗಳು ನಿರ್ಮಾಣವಾಗಿದೆ. ಪುರಿ ಮಗನಿಗಾಗಿಯೇ ಚಾರ್ಮಿ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲದೇ, ಪತ್ನಿಗಿಂತ ಹೆಚ್ಚು ಸಮಯವನ್ನು ಚಾರ್ಮಿ ಜೊತೆಯೇ ಪುರಿ ಕಳೆಯುತ್ತಿದ್ದಾರೆ. ಹಾಗಾಗಿ ಪತ್ನಿಯನ್ನು ಚಾರ್ಮಿಗಾಗಿ ತೊರೆಯಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿದೆ. ಈ ಸುದ್ದಿಯು ಎಲ್ಲ ಕಡೆ ಹರಡುತ್ತಿದ್ದಂತೆಯೇ ಪುರಿ ಅವರ ಪುತ್ರ, ನಟ ಆಕಾಶ್ ಪರೋಕ್ಷವಾಗಿ ಕೆಲ ಮಾತುಗಳನ್ನೂ ಆಡಿದ್ದಾರೆ. ಹೀಗಾಗಿ ಚಾರ್ಮಿ ಮತ್ತು ಪುರಿ ಜಗನ್ನಾಥ್ ಮಧ್ಯೆ ಅತೀವ ಬಾಂಧವ್ಯ ಇದೆ ಎಂದು ನಂಬಲಾಗಿದೆ.  ಇದನ್ನೂ ಓದಿ: ಪೃಥ್ವಿ ಅಂಬರ್ ಮತ್ತು ಪ್ರಮೋದ್ ಕಾಂಬಿನೇಷನ್ ಚಿತ್ರಕ್ಕೆ ಚಾಲನೆ

ಸದ್ಯ ಆಕಾಶ ನಟನೆಯ ಹೊಸ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ‘ನನ್ನ ತಾಯಿ ತುಂಬಾ ಒಳ್ಳೆಯವರು. ಅಪ್ಪನ ಕಷ್ಟದ ದಿನಗಳಿಂದ ಅವರ ಜೊತೆಯೇ ನಿಂತಿದ್ದಾರೆ. ಇವತ್ತು ಅಪ್ಪ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವುದಕ್ಕೆ ಅಮ್ಮನೂ ಕಾರಣನಾಗಿದ್ದಾರೆ. ಅವರಿಬ್ಬರೂ ದೂರವಾಗುವ ಪ್ರಶ್ನೆಯೇ ಇಲ್ಲ. ಯಾರಿಂದಲೂ ಅವರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಚಾರ್ಮಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಪ್ರಕಾಶ್ ಆಡಿದ ಮಾತೂ ಕೂಡ ತೆಲುಗು ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದೆ. ಒಳ್ಳೆಯ ಪತ್ನಿಯನ್ನು ದೂರ ಮಾಡುವುದು ಸರಿ ಅಲ್ಲ ಎಂದು ಚಾರ್ಮಿಗೆ ಸೋಷಿಯಲ್ ಮೀಡಿಯಾದಲ್ಲಿ ಕಿವಿಮಾತು ಹೇಳುವಂತಹ ಕಾಮೆಂಟ್ಸ್ ಕೂಡ ಬಂದಿದೆ. ಆದರೆ, ಈ ಕುರಿತು ಚಾರ್ಮಿ ಆಗಲಿ, ಪುರಿ ಜಗನ್ನಾಥ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಮ್ಮ ಮಧ್ಯೆ ಇರುವ ಬಾಂಧವ್ಯದ ಕುರಿತು ಅವರು ಎಲ್ಲಿಯೂ ಮಾತನಾಡಿಲ್ಲ.

Live Tv

Share This Article
Leave a Comment

Leave a Reply

Your email address will not be published. Required fields are marked *