ಸಿಎಂ ಮನೆಯಂಗಳದಲ್ಲೇ ಮತಾಂತರ ನಡೆಯುತ್ತಿದೆ: ಸಂಸದೆ ಶೋಭಾ ಆರೋಪ

Public TV
1 Min Read

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಂಗಳದಲ್ಲೇ ಮತಾಂತರ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷ ಸಮಾಜದ್ರೋಹಿ ಸಂಘಟನೆಗಳಿಗೆ ರಕ್ಷಣೆ ನೀಡಿ ಪೋಷಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಶನಿವಾರ ಮಂಗಳೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ಐಸಿಸ್ ಸಂಘಟನೆಗೆ ಜನರನ್ನು ನೇಮಕ ಮಾಡುವ ಪ್ರಮುಖ ಕೇಂದ್ರವಾಗಿ ಪರಿವರ್ತನೆಯಾಗಿದೆ. ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಸಿಎಂ ಸಿದ್ದರಾಮಯ್ಯನವರ ಸರ್ಕಾರ ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ಅಲ್ಲದೇ ಪೊಲೀಸ್ ಪಡೆ ಎಸಿಬಿಯನ್ನು ದುರುಪಯೋಗ ಮಾಡಕೊಳ್ಳಲಾಗುತ್ತಿದೆ. ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಹಾಕಿದೆ ಎಂದು ವಾಗ್ದಾಳಿ ನಡೆಸಿದರು.

ಬೆಂಗಳೂರಿನ ಹೆಬ್ಬಾಳದಲ್ಲಿದ್ದ ಅಕ್ಷತಾ ಅನ್ನುವ ಹುಡುಗಿ ಆಯೆಷಾ ಆಗಿದ್ದಾಳೆ. ಹೆಬ್ಬಾಳದ ಸಿರಾಜುದ್ದೀನ್ ಎಂಬ ಯುವಕ, ಝಾಕಿರ್ ನಾಯ್ಕ್ ವಿಡಿಯೋಗಳನ್ನು ತೋರಿಸಿ ಮತಾಂತರ ಮಾಡಿದ್ದ. ಐಸಿಸ್ ಸಂಘಟನೆ ಸೇರುವಂತೆ ಕಳುಹಿಸಿಕೊಟ್ಟಿದ್ದ. ಅಲ್ಲದೇ ಐಸಿಸ್ ಉಗ್ರರು ಅತ್ಯಾಚಾರ ಮಾಡಿದರು ನೀನು ಅಲ್ಲಿಯೇ ಇರಬೇಕು ಎಂದು ಹೇಳಿದ್ದ ಎಂದು ಕೇರಳ ಹೈಕೋರ್ಟ್‍ನಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಅಕ್ಷತಾ ಕೋರ್ಟ್‍ಗೆ ನೀಡಿರುವ ದೂರಿನಲ್ಲಿ ತನ್ನನ್ನು ಹೇಗೆ ಮತಾಂತರ ಮಾಡಿದ್ದಾರೆ ಎಂದು ಸಂಪೂರ್ಣವಾಗಿ ವಿವರಿಸಿದ್ದಾರೆ. ಅಕ್ಷತಾ ಐಸಿಸ್ ಎಂಬ ರಾಕ್ಷಸ ಸಂಘಟನೆಯಿಂದ ತಪ್ಪಿಸಿಕೊಂಡು ಅಹಮದಾಬಾದ್ ಬಂದಿದ್ದು, ಪೋನ್ ಮೂಲಕ ತನ್ನ ಪೋಷಕರನ್ನು ಸಂಪರ್ಕಿಸಿದ್ದಾರೆ. ಅಲ್ಲದೇ ತನಗಾದ ಕಷ್ಟಗಳನ್ನು ಕೋರ್ಟ್‍ನ ಮುಂದೆ ವಿವರಿಸಿ ರಾಷ್ಟ್ರೀಯ ತನಿಖಾ ದಳದ ಮೂಲಕ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಕೋರಿದ್ದಾರೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *