ಆ ಒಂದು ಕೆಲಸ ಮಾಡಲು ನನಗೆ ಕಷ್ಟ ಎಂದ ಯಶ್

Public TV
1 Min Read

ಬೆಂಗಳೂರು: ನುಗ್ಗೋ ಬುಲೆಟ್ ಎದ್ರುಗಡೆ ಯಾವನಿದ್ರೇನು ನುಗ್ತಾ ಇರೋದೇ ಎದೆ ಸೀಳ್ತಾ ಇರೋದೇ ಎಂದು ಹೇಳುವ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಆ್ಯಂಕರಿಂಗ್ ಮಾಡೋದು ಸ್ವಲ್ಪ ಕಷ್ಟ ಎಂದು ತಿಳಿಸಿದ್ದಾರೆ.

ಆರ್.ಜೆ ರೋಹಿತ್ ಅವರನ್ನು ರಾಕಿಂಗ್ ಸ್ಟಾರ್ ಇಂಟರ್ ವ್ಯೂ ಮಾಡಿದ್ದಾರೆ. ರೋಹಿತ್ ಅಭಿನಯದ ‘ಬಕಾಸುರ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ರಾಕಿಂಗ್ ಸ್ಟಾರ್ ರಾಕ್‍ಸ್ಟಾರ್ ಗೆ ಪ್ರಶ್ನೆಗಳನ್ನ ಹಾಕಿದ್ದರು. ಇಂಟ್ರೆಸ್ಟಿಂಗ್ ಎಂದರೆ ಫಸ್ಟ್ ಟೈಮ್ ನಿರೂಪಣೆ ಮಾಡಿದರಿಂದ ಯಶ್ ಕೊಂಚ ಎಗ್ಸೈಟ್ ಆಗಿದ್ದರು.

ಆ್ಯಂಕರಿಂಗ್ ತುಂಬಾ ಕಷ್ಟದ ಕೆಲಸ. ಏನು ಪ್ರಶ್ನೆ ಕೇಳಬೇಕು ಎಂದು ತಿಳಿಯುವುದಿಲ್ಲ. ಮಾತನಾಡುವುದು ಸುಲಭ ಆದರೆ ಅದಕ್ಕೆ ಒಂದು ನಿರ್ದಿಷ್ಟ ಪ್ರಶ್ನೆಯಿರುತ್ತದೆ. ಆ ಪ್ರಶ್ನೆಗೆ ನನ್ನ ಅಭಿಪ್ರಾಯ ಏನು ಎಂದು ಸುಲಭವಾಗಿ ಹೇಳಬಹುದು. ಆದರೆ ಒಂದು ಪ್ರಶ್ನೆಯನ್ನು ಹುಡುಕಿ ಅದನ್ನು ಕೇಳಬೇಕು ಎಂದರೆ ಕಷ್ಟದ ಕೆಲಸ. ಈಗ ಆ್ಯಂಕರಿಂಗ್ ಮಾಡುವವರ ಕಷ್ಟ ನನಗೆ ಗೊತ್ತಾಯಿತು ಎಂದು ಯಶ್ ತಿಳಿಸಿದ್ದಾರೆ.

ಆ್ಯಂಕರಿಂಗ್ ಮಾಡುವಾಗ ಮನೋರಂಜನೆ ಹಾಗೂ ಸಿನಿಮಾಗೆ ಸಂಬಂಧಪಟ್ಟ ಪ್ರಶ್ನೆಗಳನ್ನೇ ಕೇಳಬೇಕು. ಅವರ ಮನಸಿನಲ್ಲಿ ಇರುವ ಯೋಚನೆಗಳು ಹೊರಬರುವಂತೆ ಪ್ರಶ್ನೆಗಳನ್ನು ಕೇಳಬೇಕು. ಹಾಗಾಗಿ ಇದು ಕಷ್ಟದ ಕೆಲಸ. ಆದರೆ ಸಿನಿಮಾಗಾಗಿ ಹಾಗೂ ಅವರ ಮೇಲೆ ಇರುವ ಪ್ರೀತಿಗಾಗಿ ನಾನು ಈ ಕೆಲಸವನ್ನು ಮಾಡಿದೆ ಎಂದು ಯಶ್ ಹೇಳಿದ್ದಾರೆ.

ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವವರು ಹೇಗಿರಬೇಕು? ತಾನು ಯಾವುದಾದರೂ ಪಕ್ಷದ ಪ್ರಚಾರ ಮಾಡಬೇಕು ಎಂದರೆ ರಾಜಕೀಯ ನಾಯಕರು ಏನೆಲ್ಲಾ ಕೆಲಸಗಳನ್ನು ಮಾಡಬೇಕಾಗುತ್ತದೆ ಎನ್ನುವುದು ಯಶ್ ಸಾಕಷ್ಟು ಬಾರಿ ಹೇಳಿಕೊಂಡಿದ್ದರು.

ಇದೀಗ ಮತದಾರರಿಗೆ ನೀವು ಆಯ್ಕೆ ಮಾಡುವ ಪ್ರತಿನಿಧಿ ಹೇಗಿರಬೇಕು ಎನ್ನುವುದನ್ನು ಹೇಳಿದ್ದಾರೆ. ನಾಟಕದ ಮಾತುಗಳಿಗೆ ನಂಬಬೇಡಿ, ನಿಮ್ಮ ಊರು, ನಿಮ್ಮ ಏರಿಯಾದ ಸಮಸ್ಯೆಯನ್ನು ಅರಿತು ಕೆಲಸ ಮಾಡುವ ಪ್ರತಿನಿಧಿಯನ್ನು ಆಯ್ಕೆ ಮಾಡಿ. ಭಂಡ ನ್ಯಾಯದಲ್ಲಿ ಗೆಲ್ಲುತ್ತೀನಿ ಎನ್ನುವರಿಗೆ ನೀವು ಬೆಂಬಲ ಕೊಡಬೇಡಿ ಎಂದು ಯಶ್ ತಿಳಿಸಿದ್ದಾರೆ.

ಸದ್ಯ ಯಶ್ ಕೆಜಿಎಫ್ ಸಿನಿಮಾದಲ್ಲಿ ಬ್ಯೂಸಿಯಾಗಿದ್ದು, ಸ್ಟಾರ್ ಡೈರೆಕ್ಟರ್ ಅವರ ಕಾಲ್‍ಶೀಟ್‍ಗಾಗಿ ಕಾಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *