ಕಿರುತೆರೆಗೆ ಎಂಟ್ರಿ ಕೊಟ್ಟ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್

Public TV
1 Min Read

ರ್ಶನ್ ಸೇರಿದಂತೆ ಹಲವು ಸ್ಟಾರ್ ನಟರಿಗೆ ಚಿತ್ರ ಮಾಡಿರುವ ತರುಣ್ ಸುಧೀರ್, ಇದೀಗ ಕಿರುತೆರೆಗೆ ಹಾರಿದ್ದಾರೆ. ಕಾಟೇರ ಸಕ್ಸಸ್ ನಂತರ ತರುಣ್ (Tharun Sudhir) ಮತ್ತ್ಯಾವ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿ ಇತ್ತು. ಆದರೆ ದಿಢೀರ್ ಅಂತ ಕಿರುತೆರೆಗೆ ಹಾರಿದ್ದಾರೆ.

ಹಾಗಂತ ಅವರು ಯಾವುದೇ ಧಾರಾವಾಹಿ ನಿರ್ದೇಶನವಾಗಲಿ, ನಟಿಸುವುದಕ್ಕಾಗಿ ಹೋಗಿಲ್ಲ. ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರಲಿರುವ ಹೊಸ ರಿಯಾಲಿಟಿ ಶೋ ಮಹಾನಟಿಗೆ (Mahanati) ತೀರ್ಪುಗಾರರಾಗಿ ಭಾಗಿಯಾಗಲಿದ್ದಾರೆ. ಈಗಾಗಲೇ ರಿಯಾಲಿಟಿ ಶೋ ಆಡಿಷನ್ ಕೂಡ ಮುಗಿದಿದೆ. ಇನ್ನಷ್ಟೇ ಶುರುವಾಗಬೇಕಿದೆ.

 

ಮಹಾನಟಿ ರಿಯಾಲಿಟಿ ಶೋಗೂ ಮತ್ತು ಸಿನಿಮಾ ರಂಗಕ್ಕೂ ನೇರ ಸಂಬಂಧವಿದೆ. ಆ ಕಾರಣಕ್ಕಾಗಿಯೇ ಕಾಟೇರ್ ಸೂಪರ್ ಹಿಟ್ ಸಿನಿಮಾದ ನಿರ್ದೇಶಕನನ್ನು ಜೀ ಕನ್ನಡ ವಾಹಿನಿಯು ಆಯ್ಕೆ ಮಾಡಿದೆ. ಈ ಹಿಂದೆಯೂ ಅನೇಕ ಸಿನಿಮಾ ನಟರನ್ನು ವಾಹಿನಿಯು ನಾನಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ.

Share This Article