ಹಿಂದೂ ದೇವರ ವಿಗ್ರಹದ ಮೇಲೆ ದಾಳಿ ಮಾಡಿ ವಿಕೃತಿ ಮೆರೆದ ಮತಾಂತರಿ

Public TV
1 Min Read

ಮಂಡ್ಯ: ಬಲವಂತದ ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರ ಸಾಕಷ್ಟು ಸದ್ದು ಮಾಡುತ್ತಿರುವ ಹೊತ್ತಲ್ಲೇ, ಮತಾಂತರಿಯೊಬ್ಬ ಹಿಂದೂ ದೇವರ ವಿಗ್ರಹವನ್ನು ವಿರೂಪ ಮಾಡಲು ಪ್ರಯತ್ನಿಸಿದ ಘಟನೆ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.

ಇತ್ತೀಚಿಗೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಚಿಕ್ಕಬೇರ್ಯಾ ಗ್ರಾಮದ ಮಹೇಶ್ ಎಂಬಾತ ವಡ್ಡರಗುಡಿಯ ಶ್ರೀಲಕ್ಷ್ಮಿದೇವಿ ವಿಗ್ರಹದ ಮೇಲೆ ದಾಳಿ ಮಾಡಿ ವಿಕೃತಿ ಮೆರೆದಿದ್ದಾನೆ. ಕಳೆದ ರಾತ್ರಿ, ದೇಗುಲದ ಬಾಗಿಲು ಮುರಿದು, ವಿಗ್ರಹ ಧ್ವಂಸಗೊಳಿಸುವ ವೇಳೆ, ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಾನೆ. ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿ ವಿಕೃತಿ ಮೆರೆವ ತಂಡ ಸಕ್ರಿಯವಾಗಿದ್ದು, ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬಲವಂತದ ಮತಾಂತರ ಜಾಮೀನುರಹಿತ ಅಪರಾಧ

ಕ್ರೈಸ್ತ ಧರ್ಮೀಯರು ಕಾನೂನು ಬಾಹಿರವಾಗಿ ಚರ್ಚ್ ನಿರ್ಮಾಣ ಮಾಡಿದ್ದು, ಅದನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ. ಸದ್ಯ ವಿಕೃತ ಮನಸ್ಕ ಮಹೇಶ್ ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಶಿವಾಜಿ ಪ್ರತಿಮೆಗೆ ಮಸಿ ಬಳಿದವರು ಕಾಂಗ್ರೆಸ್ ಕಾರ್ಯಕರ್ತರು: ಬಿಜೆಪಿ

Share This Article
Leave a Comment

Leave a Reply

Your email address will not be published. Required fields are marked *