ಮಂತ್ರಾಲಯಕ್ಕೆ ತೆಲುಗು ನಟ ರಾಘವ ಲಾರೆನ್ಸ್ ಭೇಟಿ

Public TV
1 Min Read

ರಾಯಚೂರು: ಇಲ್ಲಿನ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠಕ್ಕೆ ತೆಲುಗು ನಟ, ನಿರ್ದೇಶಕ ರಾಘವ ಲಾರೆನ್ಸ್ ಭೇಟಿ ನೀಡಿ ರಾಯರ ದರ್ಶನ ಪಡೆದರು.

ಪತ್ನಿ ಹಾಗೂ ಮಕ್ಕಳೊಂದಿಗೆ ಕುಟುಂಬ ಸಮೇತರಾಗಿ ಬಂದಿದ್ದ ಲಾರೆನ್ಸ್, ಮಂತ್ರಾಲಯದ ಗ್ರಾಮದೇವತೆ ಮಂಚಾಲಮ್ಮ ಹಾಗೂ ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಲಾರೆನ್ಸ್ ದಂಪತಿಗೆ ಆಶೀರ್ವಾದ ನೀಡಿದರು.

ಲಾರೆನ್ಸ್ ರಾಘವೇಂದ್ರ ಅವರು ಸ್ವಾಮಿಗಳ ಪರಮ ಭಕ್ತರಾಗಿದ್ದು, ಪ್ರತಿವರ್ಷ ಮಂತ್ರಾಲಯಕ್ಕೆ ಬರುತ್ತಿದ್ದಾರೆ. ಹೀಗಾಗಿ ಈ ವರ್ಷವೂ ಕುಟುಂಬ ಸಮೇತರಾಗಿ ಬಂದು ರಾಯರ ಆಶೀರ್ವಾದ ಪಡೆದಿದ್ದಾರೆ. ಬಳಿಕ ಗಾಣದಾಳ ಪಂಚಮುಖಿ ಆಂಜನೇಯ ಹಾಗೂ ಬಿಚ್ಚಾಲಿ ಮೂಲ ಬೃಂದಾವನದ ದರ್ಶನ ಪಡೆದು ಲಾರೆನ್ಸ್ ವಾಪಸ್ ತೆರಳಿದ್ದಾರೆ.

ನಟ ರಾಘವ ಲಾರೆನ್ಸ್ ಬಂದಿರುವ ವಿಚಾರ ತಿಳಿದು ನೂರಾರು ಜನ ಅಭಿಮಾನಿಗಳು ಅವರನ್ನು ನೋಡಲು ಮಠಕ್ಕೆ ಬಂದಿದ್ದರು. ಇದರಿಂದ ಮಂತ್ರಾಲಯದಲ್ಲಿ ಕೆಲಕಾಲ ನೂಕು ನುಗ್ಗಲು ಉಂಟಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *