ಅರ್ಚಕ ಯುವಕರನನ್ನು ಮದ್ವೆಯಾದ್ರೆ ಸರ್ಕಾರದಿಂದ 3 ಲಕ್ಷ ರೂ. ಗಿಫ್ಟ್

Public TV
2 Min Read

ಹೈದರಾಬಾದ್: ತೆಲಂಗಾಣ ರಾಜ್ಯ ಸರ್ಕಾರವು ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರವ ಯುವಕರನ್ನು ಮದುವೆಯಾದರೆ ಮೂರು ಲಕ್ಷ ರೂ. ಹಣವನ್ನು ನೀಡುವ ಹೊಸ ಯೋಜನೆಯನ್ನು ಜಾರಿಗೊಳಿಸಿದೆ.

ದೇವಾಲಯಗಳಲ್ಲಿ ಅರ್ಚರಕಾಗಿ ಸೇವೆ ಸಲ್ಲಿಸುತ್ತಿರುವ ಯುವಕರ ಆದಾಯ ಅತ್ಯಂತ ಕಡಿಮೆ ಎಂಬ ಕಾರಣದಿಂದ ಅವರನ್ನು ಮದುವೆಯಾಗಲು ಯಾರು ಒಪ್ಪುತ್ತಿಲ್ಲ ಎಂಬ ಕಾರಣಕ್ಕೆ `ಕಲ್ಯಾಣ ಮಸ್ತು’ ಯೋಜನೆಯನ್ನು ಮುಂದಿನ ತಿಂಗಳಿಂನಿಂದ ಆರಂಭಿಸುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ಕಾರ ಮೊದಲು ಒಂದು ಲಕ್ಷ ರೂ.ಯನ್ನು ಮದುವೆಯ ಖರ್ಚಿಗಾಗಿ ನೀಡುತ್ತದೆ. ಮದುವೆ ಬಳಿಕ  ಉಳಿದ ಹಣವನ್ನು ದಂಪತಿಯ ಹೆಸರಿನಲ್ಲಿ ಜಂಟಿಯಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸ್ಥಿರ ಠೇವಣಿಯನ್ನು ಇಡುತ್ತದೆ. ಈ ಹಣವು ಮೂರು ವರ್ಷಗಳ ನಂತರ ದಂಪತಿಗಳಿಗೆ ಕೈಸೇರುತ್ತದೆ.

ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಮದುವೆಯ ವಿಚಾರದಲ್ಲಿ ಸ್ವತಂತ್ರರಾಗಿದ್ದು ತಮ್ಮ ಸಂಗತಿಯ ಆಯ್ಕೆಯಲ್ಲಿ ಹೆಚ್ಚು ಜಾಗೃತರಾಗಿದ್ದಾರೆ. ಸಾಪ್ಟ್ವೇರ್ ಇಂಜಿನಿಯರ್ ಯುವಕರ ಉದ್ಯೋಗದಲ್ಲೂ ಸ್ಥಿರತೆ ಇಲ್ಲದ ಕಾರಣ ಅವರ ಮದುವೆಯಾಗಲು ಕಷ್ಟವಾಗುತ್ತಿದೆ. ಇನ್ನೂ ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುವ ಯುವಕರ ಆದಾಯ ಕಡಿಮೆ ಇರುವುದರಿಂದ ಸಮಾಜದಲ್ಲಿ ಗೌರವ ಸಿಗುತ್ತಿಲ್ಲ ಎಂದು ಸಿಎಂ ಸಲಹೆಗಾರರಾದ ಕೆ.ವಿ ರಮಣಚಾರಿ ಹೇಳಿದ್ದಾರೆ.

ಹೆಣ್ಣು ಮಕ್ಕಳ ಪೋಷಕರು ಸಹ ಇಂತಹ ಯುವಕರಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಲು ಇಷ್ಟಪಡುವುದಿಲ್ಲ, ಇದರಿಂದ ಹಲವು ಯುವಕರು ಮದುವೆಯಾಗದೆ ಉಳಿಯುತ್ತಿದ್ದಾರೆ. ಸರ್ಕಾರದ ಯೋಜನೆಯಿಂದ ಇಂತಹ ಯುವಕರ ಆರ್ಥಿಕ ಜೀವನ ಉತ್ತಮಗೊಳ್ಳಲಿದೆ. ಅಲ್ಲದೇ ಹೆಣ್ಣು ಮಕ್ಕಳ ಪೋಷಕರಿಗೆ ಉತ್ತಮ ಭಾವನೆ ಮೂಡಲಿದೆ ಎಂದು ತಿಳಿಸಿದರು.

ತೆಲಂಗಾಣ ಸರ್ಕಾರವು ಈ ಯೋಜನೆಗೆ `ಕಲ್ಯಾಣ ಮಸ್ತು’ ಎಂಬ ಹೆಸರನ್ನು ಇಟ್ಟಿದ್ದು, ನವೆಂಬರ್ ತಿಂಗಳಿನಿಂದ ಅನುಷ್ಠಾನಗೊಳಿಸುತ್ತಿದೆ. ದಂಪತಿಯ ಮದುವೆಯಾದ ಮೂರು ವರ್ಷಗಳ ನಂತರ ಸ್ಥಿರ ಠೇವಣಿ ಹಣವು ಅವರ ಕೈಸೇರಲಿದ್ದು, ಅವರ ಮಕ್ಕಳ ಉತ್ತಮ ಜೀವನಕ್ಕೆ ಸಹಾಯಕವಾಗಲಿದೆ ಎಂಬುವುದೇ ಸರ್ಕಾರ ಉದ್ದೇಶವಾಗಿದೆ ಎಂದರು.

ಅರ್ಚಕ ಯುವಕರಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡವು ಪೋಷಕರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ವಧು-ವರರ ಸ್ವ ವಿವರಗಳನ್ನು ಅರ್ಜಿಯೊಂದಿಗೆ ನೀಡಬೇಕಿದೆ. ಸರ್ಕಾರವು ಈ ಯೋಜನೆಗೆ ವಾರ್ಷಿಕವಾಗಿ ಇಷ್ಟೇ ದಂಪತಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಯಾವುದೇ ನಿಯಮವನ್ನು ವಿಧಿಸಿಲ್ಲ. ಅರ್ಹ ಎಲ್ಲಾ ದಂಪತಿಗಳೂ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *