ಕೆಜಿಎಫ್ ಚಿತ್ರದ ಬಗ್ಗೆ ತೆಲಂಗಾಣ ಎಂಎಲ್‍ಎ ಟ್ವೀಟ್

Public TV
1 Min Read

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಚಿತ್ರ ವಿಶ್ವಾದ್ಯಂತ ಸದ್ದು ಮಾಡಿದೆ. ಈ ಚಿತ್ರವನ್ನು ನೋಡಿ ಅನೇಕ ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ತೆಲಂಗಾಣದ ಸಿರಿಸಿಲ್ಲಾ ಶಾಸಕ ಕೆಟಿಆರ್ ಅವರು ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಕೆಟಿಆರ್ ಎಂದು ಖ್ಯಾತರಾಗಿರುವ ರಾಮ ರಾವ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ನಾನು ಕೆಜಿಫ್ ಸಿನಿಮಾ ನೋಡಲು ಸ್ವಲ್ಪ ತಡ ಮಾಡಿದೆ. ಆದರೂ ಈ ಸಿನಿಮಾವನ್ನು ವೀಕ್ಷಿಸಿದ್ದೇನೆ. ಪ್ರಶಾಂತ್ ನೀಲ್ ಈ ಸಿನಿಮಾವನ್ನು ಅದ್ಭುತವಾಗಿ ನಿರ್ದೇಶಿಸಿದ್ದಾರೆ. ಈ ಚಿತ್ರದ ಸ್ಕ್ರೀನ್‍ಪ್ಲೇ ಹಾಗೂ ಬಿಜಿಎಂ ಅದ್ಭುತವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‍ಗೆ ಯಶ್ ಅವರು ಪ್ರತಿಕ್ರಿಯಿಸಿ, “ಧನ್ಯವಾದಗಳು ಸರ್. ನಮ್ಮ ಸಿನಿಮಾದ ಬಗ್ಗೆ ನೀವು ಇಂತಹ ಮಾತುಗಳನ್ನಾಡಿದ್ದು, ನಮ್ಮ ತಂಡಕ್ಕೆ ಹೆಮ್ಮೆಯ ವಿಷಯ” ಎಂದು ರೀ-ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ರಾಣಾ ಅವರು ಟ್ವಿಟ್ಟರಿನಲ್ಲಿ “ಕೊನೆಗೂ ಕೆಜಿಎಫ್ ಸಿನಿಮಾ ನೋಡುವ ಅವಕಾಶ ಲಭಿಸಿತ್ತು. ಆದರೆ ತಡವಾಗಿದೆ ಎಂದು ನನಗೆ ಗೊತ್ತಿದೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ನಿರ್ದೇಶಕರಾದ ಪ್ರಶಾಂತ್ ನೀಲ್, ಯಶ್, ಅವರಿಗೆ ಶುಭಾಶಯ. ಚಿತ್ರದ ಧೀರ ಧೀರ ಸುಲ್ತಾನ ಹಾಡು ಇಷ್ಟ ಆಯ್ತು” ಎಂದು ಟ್ವೀಟ್ ಮಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *