ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷನ ಮಗನಿಂದ ಸಹ ವಿದ್ಯಾರ್ಥಿಯ ಮೇಲೆ ಹಲ್ಲೆ- ದೂರು ದಾಖಲು

Public TV
1 Min Read

ಹೈದರಾಬಾದ್: ಸಹ ವಿದ್ಯಾರ್ಥಿಯ (Student) ಮೇಲೆ ಹಲ್ಲೆ ನಡೆಸಿದ್ದ ಆರೋಪದ ಮೇರೆಗೆ ತೆಲಂಗಾಣದ (Telangana) ಬಿಜೆಪಿ (BJP) ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ (Bandi Sanjay Kumar) ಮಗನ ವಿರುದ್ಧ ಕೇಸ್ ದಾಖಲಾಗಿದೆ.

ಹೈದರಾಬಾದ್‍ನ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿತ್ತು. ಸಹ ವಿದ್ಯಾರ್ಥಿ ಶ್ರೀರಾಮ್ ಎಂಬಾತನ ಮೇಲೆ ಸಂಜಯ್ ಕುಮಾರ್ ಪುತ್ರ ಬಂಡಿ ಭಾಗಿರಥ ಸಾಹಿ ಹಲ್ಲೆ ನಡೆಸಿದ್ದ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಬೆನ್ನಲ್ಲೇ ಮಹೀಂದ್ರಾ ವಿಶ್ವವಿದ್ಯಾನಿಲಯವು ನೀಡಿದ ದೂರು ನೀಡಿದೆ. ಇದರ ಆಧಾರದ ಮೇಲೆ ಬಂಡಿ ಭಾಗೀರಥ್ ಸಾಹಿಯ ವಿರುದ್ಧ ದೂರು ದಾಖಲಾಗಿದೆ.

ವೀಡಿಯೋದಲ್ಲಿ ಏನಿದೆ?: ಕಾಲೇಜು ಆವರಣದಲ್ಲಿ ಶ್ರೀರಾಮ್ ಎಂಬಾತನಿಗೆ ಭಗೀರಥ ಪದೇ ಪದೇ ಕಪಾಳಮೋಕ್ಷ ಮಾಡಿದ್ದಾನೆ. ಈ ವೇಳೆ ಭಗಿರಥನ ಸ್ನೇಹಿತನೂ ಹಲ್ಲೆ ನಡೆಸಿದ್ದ. ಮತ್ತೊಂದು ವೀಡಿಯೋದಲ್ಲಿ ಹಾಸ್ಟೆಲ್ ಕೊಠಡಿಯಲ್ಲಿ ಭಗಿರಥ ಹಾಗೂ ಇತರ ಐದಾರು ವಿದ್ಯಾರ್ಥಿಗಳು ಸೇರಿ ಶ್ರೀರಾಮನನ್ನು ನಿಂದಿಸಿ ಥಳಿಸಿದ್ದಾರೆ. ಅದಾದ ಬಳಿಕ ಇತರ ವಿದ್ಯಾರ್ಥಿಗಳ ಮೇಲೂ ಹಲ್ಲೆ ನಡೆಸಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಶ್ರೀರಾಮ್ ತನ್ನ ಸಹಪಾಠಿಯ ಸಹೋದರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ಎಂದು ಭಗಿರಥ ತಿಳಿಸಿದ್ದ. ಅಷ್ಟೇ ಅಲ್ಲದೇ ಬಂಡಿ ಸಂಜಯ್ ಕುಮಾರ್ ಅವರ ಕಚೇರಿಯು ಇದಕ್ಕೆ ಪೂರಕವಾದ ವೀಡಿಯೋವನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಶ್ರೀರಾಮ್ ಅವರು ಹುಡುಗಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಆದ್ದರಿಂದ ಅವರನ್ನು ಭಗೀರಥ ಮತ್ತು ಇತರ ಕೆಲವು ವಿದ್ಯಾರ್ಥಿಗಳು ಥಳಿಸಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಶ್ರೀರಾಮ ಮಾತನಾಡಿ, ತಪ್ಪೊಪ್ಪಿಕೊಂಡಿದ್ದಾನೆ. ಹುಡುಗಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದ ಭಗೀರಥ ನನಗೆ ಕಪಾಳಮೋಕ್ಷ ಮಾಡಿದ್ದಾನೆ. ಸುಮಾರು ಎರಡು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಬಳಿಕ ರಾಜಿ ಮಾಡಿಕೊಂಡಿದ್ದೇವೆ. ಇದು ನಿಷ್ಪ್ರಯೋಜಕ ವೀಡಿಯೋವಾಗಿದ್ದು, ದಯವಿಟ್ಟು ಈ ಘಟನೆಯನ್ನು ಇಲ್ಲಿಗೆ ನಿಲ್ಲಿಸಿ ಎಂದು ಮನವಿ ಮಾಡಿದ್ದಾನೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *