ಟಾರ್ಚರ್ ತಾಳಲಾರದೆ ಮಡಿವಾಳ ಕೆರೆಗೆ ಬಿದ್ದು ಟೆಕ್ಕಿ ಆತ್ಮಹತ್ಯೆ

Public TV
1 Min Read

ಬೆಂಗಳೂರು: ಮಡಿವಾಳ ಕೆರೆಯಲ್ಲಿ ಯುವಕ ಆತ್ಮಹತ್ಯೆಗೈದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಯುವಕನ ಸಾವಿನ ಹಿಂದೆ ಆಫೀಸ್ ಟೆನ್ಷನ್ ಕಾರಣ ಎನ್ನುವ ವಿಚಾರ ಪೊಲೀಸ್ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ವಿಶ್ವಾಸ್(27) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಡಿ.13ರಂದು ಮನೆ ಬಿಟ್ಟು ಹೋಗಿದ್ದ ವಿಶ್ವಾಸ್ ಶವ ಡಿ. 20ರಂದು ಮಡಿವಾಳ ಕೆರೆಯಲ್ಲಿ ಪತ್ತೆಯಾಗಿತ್ತು. ವಿಶ್ವಾಸ್ ಪೋಷಕರು ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುವಾಗ ಅಸಲಿ ವಿಷಯ ಪತ್ತೆಯಾಗಿದೆ.

ಐಟಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ವಿಶ್ವಾಸ್ ನನ್ನು 1 ತಿಂಗಳ ಹಿಂದೆ ಕಾರ್ಯಕ್ಷಮತೆ(ಪರ್ಫಮೆನ್ಸ್) ಸರಿ ಇಲ್ಲ ಎಂದು ಹೇಳಿ ಆತನನ್ನು ಕೆಲಸದಿಂದ ತೆಗೆದು ಹಾಕಿತ್ತು. ಹಾಗಾಗಿ ವಿಶ್ವಾಸ್ ಕೆಲಸದ ಒತ್ತಡ ಸಹಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹೆಣ ಸಿಕ್ಕ ಬಳಿಕ ಮೇಲ್ ಒಪನ್ ಮಾಡಿದ ಪೊಲೀಸರಿಗೆ ಡೆತ್ ನೋಟ್ ಸಿಕ್ಕಿದೆ. ಪೊಲೀಸರು ಐಪಿಸಿ 306(ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಖಾಸಗಿ ಕಂಪನಿಗೆ ನೋಟಿಸ್ ಜಾರಿಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *