ಬ್ಲೇಡ್ ನಿಂದ ಕತ್ತು ಕೊಯ್ದು ಹಲ್ಲೆ: ಅಂಗನವಾಡಿ ಶಿಕ್ಷಕಿಯಿಂದ ಪೈಶಾಚಿಕ ಕೃತ್ಯ

Public TV
1 Min Read

ಬೆಂಗಳೂರು: ತನ್ನ ಮೊಮ್ಮಗನೊಂದಿಗೆ ಜಗಳವಾಡಿ ಗಾಯಗೊಳಿಸಿದ್ದಾನೆ ಎನ್ನುವ ಕಾರಣಕ್ಕೆ ಅಂಗನವಾಡಿ ಶಿಕ್ಷಕಿಯೊಬ್ಬರು 7 ವರ್ಷದ ಬಾಲಕನಿಗೆ ಬ್ಲೇಡ್ ನಿಂದ ಹಲ್ಲೆ ಮಾಡಿದ ಅಮಾನವೀಯ ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಸಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಸಘಟ್ಟ ಗ್ರಾಮದ ನಿವಾಸಿಗಳಾದ ಮುನಿರತ್ನ ಮತ್ತು ಅಂಜನ್ ಕುಮಾರ್ ದಂಪತಿ ಮಗು ಪೃಥ್ವಿರಾಜ್(7) ಹಲ್ಲೆಗೊಳಗಾದ ಬಾಲಕ.

ಈ ಮೊದಲು ಬಾಲಕ ಪೃಥ್ವಿರಾಜ್ ಮುನಿಯಮ್ಮಳ ಮೊಮ್ಮಗನ ಜೊತೆ ಆಟವಾಡುವಾಗ ಆಕಸ್ಮಿಕವಾಗಿ ಬ್ಲೇಡು ತಾಗಿಸಿ ಗಾಯಗೊಳಿಸಿದ್ದ. ಇದರಿಂದ ಸಿಟ್ಟಾದ ಮುನಿಯಮ್ಮ ನನ್ನ ಮೊಮ್ಮಗನಿಗಾದ ಗತಿ ನಿನಗೂ ಆಗಲಿ ಎಂದು ಈ ರೀತಿ ಪೃಥ್ವಿರಾಜ್ ಮೇಲೆ ಹಲ್ಲೆ ನಡೆಸಿದ್ದಾಳೆ.

ಬ್ಲೇಡ್ ಹರಿತವಾದ್ದರಿಂದ ಬಾಲಕನ ಮೈ ಮೇಲೆ ಗಂಭೀರ ಗಾಯಗಳಾಗಿವೆ. ಗಾಯಗೊಂಡಿರುವ ಬಾಲಕನನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಪೃಥ್ವಿರಾಜ್ ಪಾಲಕರು ಮುನಿಯಮ್ಮ ವಿರುದ್ಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *