ಕರ್ನಾಟಕದಲ್ಲಿ ಆಂಧ್ರ ಸಂಸದರ ಪುತ್ರನ ಗೂಂಡಾಗಿರಿ- ಟೋಲ್‍ಪ್ಲಾಜಾ ಪುಡಿ-ಪುಡಿ

Public TV
1 Min Read

ಚಿಕ್ಕಬಳ್ಳಾಪುರ: ಕರ್ನಾಟಕದಲ್ಲಿ ಆಂಧ್ರ ಸಂಸದರೊಬ್ಬರ ಪುತ್ರ ಗೂಂಡಾಗಿರಿ ನಡೆಸಿದ್ದು, ಕರ್ನಾಟಕ- ಆಂಧ್ರ ಪ್ರದೇಶದ ಗಡಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಗಡಿಭಾಗದ ಟೋಲ್ ಪ್ಲಾಜಾವನ್ನ ಧ್ವಂಸಗೊಳಿಸಿದ್ದಾನೆ.

 

 

ಸಂಸದ ಕೃಷ್ಟಪ್ಪ ನಿಮ್ಮಲ

ತೆಲುಗುದೇಶಂ ಪಕ್ಷದ ಹಿಂದೂಪುರ ಸಂಸದ ನಿಮ್ಮಲ ಕೃಷ್ಟಪ್ಪ ಪುತ್ರ ಅಂಬರೀಶ್ ಈ ಕೃತ್ಯವೆಸಗಿದ್ದಾನೆ. ಟೋಲ್ ನಲ್ಲಿ ಹಣ ಪಾವತಿ ಮಾಡುವಂತೆ ಕೇಳಿದ್ದಕ್ಕೆ ಅಂಬರೀಶ್ ಆಕ್ರೋಶಗೊಂಡು ಟೋಲ್ ಗೇಟ್ ಬೇಧಿಸಿಕೊಂಡು ಕಾರು ಚಲಾಯಿಸಿದ್ದಾನೆ. 10 ನಿಮಿಷದ ನಂತರ 10 ಮಂದಿ ಅಂಬರೀಶ್ ಬೆಂಬಲಿಗರು ಟೋಲ್‍ಗೆ ನುಗ್ಗಿದ್ದು, ಟೋಲ್‍ಬೂತ್‍ಗಳ ಗಾಜುಗಳನ್ನ ಪುಡಿ ಪುಡಿ ಮಾಡಿದ್ದಾರೆ. ಟೋಲ್ ಕಚೇರಿಗೆ ನುಗ್ಗಿ ಕಂಪ್ಯೂಟರ್, ಪಿಠೋಪಕರಣಗಳನ್ನ ಧ್ವಂಸಗೊಳಿಸಿ, ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಸ್ವತಃ ನಿಮ್ಮಲ ಕೃಷ್ಟಪ್ಪ ಗಲಾಟೆ ಮಾಡಿ ದಾಂಧಲೆ ನಡೆಸಿದ್ದು, ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

 

Share This Article
Leave a Comment

Leave a Reply

Your email address will not be published. Required fields are marked *