ಮೇ ಅಂತ್ಯಕ್ಕೆ ರಾಜ್ಯದ ಜನತೆಗೆ ಗುಡ್ ನ್ಯೂಸ್?

Public TV
1 Min Read

ಬೆಂಗಳೂರು: ದಾವೋಸ್‍ನಿಂದ ನಾಳೆ ಬೆಳಗ್ಗೆ ಸಿಎಂ ರಾಜ್ಯಕ್ಕೆ ವಾಪಸ್ ಆಗಲಿದ್ದು, ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಕೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸುವ ಸಾಧ್ಯತೆ ಇದೆ.

ದಾವೋಸ್‍ನಿಂದ ಬಂದ ಬಳಿಕ ಆರ್ಥಿಕ ಇಲಾಖೆ, ವಾಣಿಜ್ಯ ಇಲಾಖೆಗಳ ಹಿರಿಯ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸುವ ಸಾಧ್ಯತೆ ಇದ್ದು, ಸಭೆಯಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಕೆಯ ಕುರಿತು ನಿರ್ಧಾರವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮೇ ಅಂತ್ಯಕ್ಕೆ ರಾಜ್ಯದ ಜನತೆಗೆ ಗುಡ್ ನ್ಯೂಸ್ ಬರುವ ನಿರೀಕ್ಷೆಯಿದೆ.

ದಾವೋಸ್‍ಗೆ ಹೋಗುವ ಮುನ್ನ ಬೊಮ್ಮಾಯಿ ಅವರು, ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಕೆ ಪರಿಶೀಲಿಸುವುದಾಗಿ ತಿಳಿಸಿದ್ದರು. ಈಗಾಗಲೇ ತೆರಿಗೆ ಇಳಿಕೆ ಬಗ್ಗೆ ವಿಪಕ್ಷಗಳು, ಜನತೆ, ಬಿಎಸ್‍ವೈ ಸೇರಿದಂತೆ ಹಲವು ಸ್ವಪಕ್ಷೀಯರೂ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಚೀನಿ ಪ್ರಜೆಗಳಿಗೆ ವೀಸಾ ನೀಡಿದ ಪ್ರಕರಣ- ಕಾರ್ತಿ ಚಿದಂಬರಂಗೆ ಸಿಬಿಐ ಸಮನ್ಸ್

petrol

ಕಳೆದ ನವೆಂಬರ್‌ನಲ್ಲೂ ಕೇಂದ್ರದಿಂದ ಅಬಕಾರಿ ಸುಂಕ ಇಳಿಕೆ ಆಗಿತ್ತು. ಆಗ ರಾಜ್ಯದಿಂದಲೂ ಪೆಟ್ರೊಲ್, ಡೀಸೆಲ್ ದರದಲ್ಲಿ ತಲಾ 7 ರೂ. ಇಳಿಕೆ ಆಗಿತ್ತು. ಈಗ ಮತ್ತೆ ಕೇಂದ್ರದಿಂದ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಇಳಿಕೆ ಆದ ಹಿನ್ನೆಲೆಯಲ್ಲಿ ರಾಜ್ಯದ ಮೇಲೂ ತೆರಿಗೆ ಇಳಿಸಲು ಒತ್ತಡ ಹಾಕಲಾಗಿದೆ. ಇದನ್ನೂ ಓದಿ: ಹುಳ ಬಿದ್ದ ಅಕ್ಕಿ ಬಳಸಿ ಮಕ್ಕಳಿಗೆ ಬಿಸಿಯೂಟ – ಸ್ಥಳೀಯರ ಆಕ್ರೋಶ

Share This Article
Leave a Comment

Leave a Reply

Your email address will not be published. Required fields are marked *