ಬಿಜೆಪಿಗೆ ಟಿಪ್ಪು ಬೇಡ, ಬಿಎಸ್‍ವೈ ಜೈಲಿಗೆ ಹೋದ ವಿಚಾರವನ್ನು ಮಕ್ಕಳು ಓದಬೇಕಿದೆ – ತನ್ವೀರ್ ಸೇಠ್

Public TV
1 Min Read

ಮೈಸೂರು: ಬಿಜೆಪಿಯವರಿಗೆ ಟಿಪ್ಪು ಸಾಧನೆಯನ್ನು ಮಕ್ಕಳು ಓದುವುದು ಬೇಕಾಗಿಲ್ಲ, ಬದಲಿಗೆ ಯಡಿಯೂರಪ್ಪ ಜೈಲಿಗೆ ಹೋದ ವಿಚಾರವನ್ನು ಮುಂದಿನ ಪೀಳಿಗೆಯ ಮಕ್ಕಳು ಓದಬೇಕಿದೆ ಎಂದು ಮಾಜಿ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

ಶಾಲಾ ಪಠ್ಯಪುಸ್ತಕದಲ್ಲಿ ಟಿಪ್ಪು ಪಠ್ಯವನ್ನು ತೆಗೆಯುವ ಕುರಿತ ಸಿಎಂ ಹೇಳಿಕೆ ಕುರಿತು ಮಾತನಾಡಿದ ಅವರು, ಆಪರೇಷನ್ ಕಮಲ, ಗಣಿ ಲೂಟಿ ಮಾಡಿರುವುದು ಇವರಿಗೆ ನಿಜವಾದ ಇತಿಹಾಸ. ಇದನ್ನೇ ಮುಂದಿನ ಪೀಳಿಗೆಯ ಮಕ್ಕಳು ಓದಲಿ ಎಂದು ಬಯಸಿದ್ದಾರೆ. ಬಿಜೆಪಿಯವರು ಬ್ರಿಟಿಷರ ಪರ ನಿಂತವರು, ಗಾಂಧೀಜಿಯನ್ನು ಕೊಂದವರು. ಬಿಜೆಪಿಯವರ ಇತಿಹಾಸ ಸ್ವಾತಂತ್ರ್ಯ ಪುಟದಲ್ಲಿ ಇಲ್ಲ. ಬಿಜೆಪಿಯದು ಹಿಟ್ಲರ್ ಸಾಮ್ರಾಜ್ಯಕ್ಕಿಂತ ಕೀಳು ಎಂದು ವಾಗ್ದಾಳಿ ನಡೆಸಿದರು.

ಅಲ್ಪಸಂಖ್ಯಾತ ಸಮುದಾಯ ಟಿಪ್ಪು ಜಯಂತಿ ಮಾಡಿ ಪಠ್ಯದಲ್ಲಿ ಸೇರಿಸಲು ಕೇಳಿರಲಿಲ್ಲ. ಟಿಪ್ಪುವಿನದು ದೊಡ್ಡ ಇತಿಹಾಸ. ಅದನ್ನು ವ್ಯವಸ್ಥಿತವಾಗಿ ತಿರುಚಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಹಾಗೂ ಅವರ ಪರ ಮಾತನಾಡುವವರನ್ನು ಘಾತಕುಶಕ್ತಿಗಳಂತೆ ಬಿಂಬಿಸಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *