ತಾಜ್ ಮಹಲ್ ಶಿವನ ಮಂದಿರವೇ ಆಗಿದ್ದರೆ 20 ಸಾವಿರ ಮುಸ್ಲಿಮರಿಂದ ಅದನ್ನು ಕೆಡವೋಣ – ಅಜಂ ಖಾನ್ ವ್ಯಂಗ್ಯ

Public TV
1 Min Read

ಲಕ್ನೋ: ವಿವಾದತ್ಮಾಕ ಹೇಳಿಕೆಗಳಿಂದ ಸುದ್ದಿಯಾಗುವ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಮತ್ತೊಮ್ಮೆ ವಿವಾದತ್ಮಾಕ ಹೇಳಿಕೆ ನೀಡಿದ್ದು, ತಾಜ್ ಮಹಲ್ ಶಿವನ ಮಂದಿರವಾಗಿದ್ದರೆ ಅದನ್ನು 20 ಸಾವಿರ ಮುಸ್ಲಿಮರಿಂದ ಕೆಡವೋಣ, ಗುಲಾಮಗಿರಿಯ ಗುರುತು ಇರಬಾರದು ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಾಜ್‍ಮಹಲ್ ಕಟ್ಟಡ ಕೆಡವಲು ಮುಂದಾಗಬೇಕು. ಬಳಿಕ ನಾನು ಹಾಗೂ ನನ್ನೊಂದಿಗೆ ಹಲವರು ಕೈ ಜೋಡಿಸಲಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ತಾಜ್ ಮಹಲ್ ಶಿವನ ಮಂದಿರವಾಗಿತ್ತು ಎಂಬ ಯೋಗಿ ಆದಿತ್ಯಾನಾಥ್ ವಾದಕ್ಕೆ ತಿರುಗೇಟು ನೀಡಿದ್ದಾರೆ.

ಇದೇ ವೇಳೆ ಸಿಎಂ ಯೋಗಿ ಆದಿತ್ಯನಾಥ್ ಅವರ ವಾದವನ್ನು ಒಪ್ಪುತ್ತೇನೆ ಎಂದು ಹೇಳಿರುವ ಅವರು, ಅದ್ದರಿಂದಲೇ ಅವರೇ ಮೊದಲು ಈ ಕಾರ್ಯ ಆರಂಭಿಸಬೇಕು. ಬಳಿಕ ನಮ್ಮ ಮುಸ್ಲಿಂ ಸಮುದಾಯದ 20 ಸಾವಿರ ಮಂದಿ ಈ ಕಾರ್ಯದಲ್ಲಿ ತೊಡಗುತ್ತಾರೆ ಎಂದಿದ್ದಾರೆ.

ಸದ್ಯ ಅಜಂ ಖಾನ್ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಹೇಳಿಕೆ ಪರ ಹಾಗೂ ವಿರೋಧದ ಚರ್ಚೆಗಳು ಆರಂಭವಾಗಿದೆ. ಕೆಲ ದಿನಗಳ ಹಿಂದೆ ತಾಜ್‍ಮಹಲ್ ಗೆ ಭೇಟಿ ನೀಡಿದ್ದ ಕೆಲವರು ಶಿವ ಚಾಲಿಸಾ ಪಠಿಸಿದಕ್ಕೆ ಅರೆಸ್ಟ್ ಆಗಿದ್ದರು.

ಅಜಂ ಖಾನ್ ಈ ರೀತಿಯ ಹೇಳಿಕೆ ನೀಡುವುದು ಇದೇ ಹೊಸದೆನಲ್ಲ. ಈ ಹಿಂದೆ ದೆಹಲಿ ಕೆಂಪುಕೋಟೆ, ರಾಷ್ಟ್ರಪತಿ ಭವನ, ಸಂಸತ್ ಭವನ ಗುಲಾಮಗಿರಿಯ ಸಂಕೇತವಾಗಿದ್ದು, ಇದನ್ನು ಕೆಡವಬೇಕು ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *