ಬೆಳಗಾವಿಯಲ್ಲಿ ಮತ್ತೊಂದು ಹೋರಾಟಕ್ಕೆ ಸ್ವಾಮೀಜಿಗಳು ಮುನ್ನುಡಿ!

Public TV
1 Min Read

ಬೆಂಗಳೂರು: ಪ್ರತ್ಯೇಕ ಉತ್ತರ ಕರ್ನಾಟಕ ಬಂದ್‍ಗೆ 1 ದಿನ ಬಾಕಿ ಇರುವಾಗಲೇ ಬೆಳಗಾವಿಯಲ್ಲಿ ಮತ್ತೊಂದು ಹೋರಾಟಕ್ಕೆ ಸ್ವಾಮೀಜಿಗಳು ಮುನ್ನುಡಿ ಬರೆಯಲಿದ್ದಾರೆ. ಇಂದು ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ನೂರಾರು ಸ್ವಾಮೀಜಿಗಳು ಒಂದೇ ವೇದಿಕೆಯಲ್ಲಿ ಹೋರಾಟಕ್ಕೆ ಧುಮುಕಲಿದ್ದಾರೆ.

ಬೆಳಗ್ಗೆ 10 ಗಂಟೆಗೆ ಬೆಳಗಾವಿಯ ಸುವರ್ಣಸೌಧದ ಮುಂದೆ ಎಲ್ಲ ಸ್ವಾಮೀಜಿಗಳು ಸೇರಲಿದ್ದಾರೆ. ಉತ್ತರ ಕರ್ನಾಟಕ ಅಭಿವೃದ್ಧಿ, ಸುವರ್ಣ ಸೌಧಕ್ಕೆ ಕಾರ್ಯಕಲ್ಪ ನೀಡಿ 10ಕ್ಕೂ ಅಧಿಕ ಇಲಾಖೆಗಳನ್ನ ಬೆಂಗಳೂರಿನಿಂದ ಬೆಳಗಾವಿಗೆ ಸ್ಥಳಾಂತರಿಸಬೇಕೆಂದು ಹೋರಾಟಗಾರರು ಬೇಡಿಕೆ ಇಟ್ಟಿದ್ದಾರೆ. ಆದರೆ ಇದೇ ವೇಳೆ ಸ್ವಾಮೀಜಿಗಳು ಗ್ರೀನ್ ಸಿಗ್ನಲ್ ಕೊಟ್ಟರೆ ಪ್ರತ್ಯೇಕ ರಾಜ್ಯದ ಧ್ವಜ ಹಾರಿಸಲು ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟ ಸಮಿತಿ ಮುಂದಾಗಿದೆ.

ವಿಧಾನಸಭೆ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಬೆಳಗಾವಿಗೆ ಭೇಟಿ ನೀಡ್ತಿರೋದು ಈ ಪ್ರತಿಭಟನೆಗೆ ರಾಜಕೀಯ ಆಯಾಮ ನೀಡಿದೆ. ತಾನು ಸ್ವಾಮೀಜಿಗಳ ಮನವೊಲಿಕೆಗೆ ಹೋಗ್ತಿರೋದಾಗಿ ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಕಾಂಗ್ರೆಸ್‍ನವರು ಧರ್ಮ ಒಡೆಯಲು ನೋಡಿದ್ದರು. ಆದರೆ ದೇವೇಗೌಡರು ರಾಜ್ಯವನ್ನೇ ಒಡೆಯಲು ನೋಡ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *