ಗೃಹಿಣಿಯ ಅನುಮಾನಾಸ್ಪದ ಸಾವು: ಕೈ-ಕಾಲು ಕಟ್ಟಿ, ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

Public TV
0 Min Read

ವಿಜಯಪುರ: ಮನೆಯ ಜಂತಿಗೆ ಕೈ, ಕಾಲು ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಣಿಯ ಶವ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ನಡೆದಿದೆ.

ಬಸಮ್ಮ ಸಜ್ಜನ (30) ಸಾವನ್ನಪ್ಪಿರುವ ಗೃಹಿಣಿ. ಘಟನೆಯ ಬಳಿಕ ಬಸಮ್ಮನ ಗಂಡ ವಿರೇಶ್, ಮಾವ ಶಿವಶರಣಪ್ಪ ಹಾಗೂ ಅತ್ತೆ ಪಾರ್ವತಿ ನಾಪತ್ತೆಯಾಗಿದ್ದಾರೆ. ವರದಕ್ಷಿಣೆಗಾಗಿ ವಿರೇಶ್, ಶಿವಶರಣಪ್ಪ, ಪಾರ್ವತಿ ಮೂವರು ಸೇರಿ ಬಸಮ್ಮನನ್ನು ಹತ್ಯೆ ಮಾಡಿರುವುದಾಗಿ ಅವರ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಈ ಸಂಬಂಧ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *