ರಾಜ್ಯ ಹೈಕೋರ್ಟಿಗೆ ಐವರು ಖಾಯಂ ನ್ಯಾಯಾಧೀಶರ ನೇಮಕ

Public TV
0 Min Read

ನವದೆಹಲಿ: ಕರ್ನಾಟಕ ಹೈಕೋರ್ಟಿಗೆ ಖಾಯಂ ನ್ಯಾಯಾಧೀಶರ ನೇಮಕ ಮಾಡಲಾಗಿದೆ. ಹೆಚ್ಚುವರಿ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿರುವ ಐದು ಮಂದಿ ನ್ಯಾಯಾಧೀಶರನ್ನು ಖಾಯಂಗೊಳಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

ನ್ಯಾ. ದೀಕ್ಷಿತ್ ಕೃಷ್ಣ ಶ್ರೀ ಪಾದ, ನ್ಯಾ. ಶಂಕರ್ ಗಣಪತಿ ಪಂಡಿತ್, ನ್ಯಾ.ರಾಮಕೃಷ್ಣ ದೇವದಾಸ್, ನ್ಯಾ. ಸಿದ್ದಪ್ಪ ಸುನೀಲ್ ದತ್ ಯಾದವ್, ನ್ಯಾ.ಬಿ. ಮಲ್ಲಿಕಾರ್ಜುನ ಶ್ಯಾಮ್ ಪ್ರಸಾದ್ ನೇಮಕ ಗೊಂಡಿರುವ ಖಾಯಂ ನ್ಯಾಯಾಧೀಶರು.

ಖಾಯಂ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಕರ್ನಾಟಕದ ಹೈಕೋರ್ಟಿನಿಂದ ಸುಪ್ರೀಂಕೋರ್ಟ್ ಕೊಲಿಜಿಯಂ ಮನವಿ ಮಾಡಲಾಗಿತ್ತು. ಮನವಿ ಹಿನ್ನೆಲೆಯಲ್ಲಿ ಮಂಗಳವಾರ ಸಭೆ ನಡೆಸಿದ್ದ ಸುಪ್ರೀಂಕೋರ್ಟ್ ಕೊಲಿಜಿಯಂ ಹೆಚ್ಚುವರಿ ನ್ಯಾಯಧಿಶರನ್ನು ಖಾಯಂ ಮಾಡಿ ಆದೇಶ ಹೊರಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *