ಹಳೇ ಹುಬ್ಬಳ್ಳಿಯ ದಿಡ್ಡಿ ಹನುಮಂತ ದೇವಸ್ಥಾನದಲ್ಲಿ ಮೊಳಗಿದ ಸುಪ್ರಭಾತ

Public TV
1 Min Read

ಹುಬ್ಬಳ್ಳಿ: ಇಂದಿನಿಂದ ಹಿಂದೂ ಧಾರ್ಮಿಕ ಸ್ಥಳದಲ್ಲಿ ಬೆಳಗ್ಗಿನ ಜಾವ ಸುಪ್ರಭಾತ ಅಭಿಯಾನ ಆರಂಭವಾದ ಹಿನ್ನೆಲೆ ಹುಬ್ಬಳ್ಳಿ ವಿವಾದಿತ ದೇವಸ್ಥಾನದಲ್ಲಿಯೇ ಮೊದಲ ಸುಪ್ರಭಾತ ಮೊಳಗಿದೆ.

ಹಳೇ ಹುಬ್ಬಳ್ಳಿಯ ದಿಡ್ಡಿ ಹನುಮಂತ ದೇವಸ್ಥಾನದಲ್ಲಿ ಸುಪ್ರಭಾತ ಅಭಿಯಾನಕ್ಕೆ ಶ್ರೀರಾಮಸೇನೆ ಚಾಲನೆ ನೀಡಿದೆ. ಹನುಮನ ಜಪಿಸುವ ಮಂತ್ರ ಮತ್ತು ಭಕ್ತಿಗೀತೆಗಳ ಜೊತೆಗೆ ಭಜನೆ ಮತ್ತು ಘಂಟಾಘೋಷಣೆ ಮೊಳಗಿದೆ. ಜೊತೆಗೆ ಶ್ರೀರಾಮಸೇನೆ, ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಮತ್ತು ಅರ್ಚಕರಿಂದ ವಿಶೇಷ ಪೂಜೆ ಸಹ ನಡೆದಿದೆ. ಇದನ್ನೂ ಓದಿ: ನಾವು ಮತ್ತೆ ಅಧಿಕಾರಕ್ಕೆ ಬಂದ್ರೆ 7 ಕೆಜಿ ಅಲ್ಲ, ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ: ಸಿದ್ದು

ಕಳೆದ ತಿಂಗಳು ನಡೆದ ಕೋಮು ಗಲಭೆಯಲ್ಲಿ ಈ ದೇವಸ್ಥಾನದ ಮೇಲೆ ದಾಳಿಯಾಗಿತ್ತು. ಈಗ ಇದೇ ದೇವಸ್ಥಾನದಲ್ಲಿ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಮುನ್ನೆಚ್ಚರಿಕೆ ಕ್ರಮವಾಗಿ ದೇವಸ್ಥಾನದ ಸುತ್ತಲೂ ಪೋಲಿಸರ ಭದ್ರತೆ ಹಾಕಲಾಗಿದೆ. ಇದನ್ನೂ ಓದಿ: ಸೀರೆ ಹಂಚಿಕೆವಾಗ ನುಕುನುಗ್ಗಲು: ಮಗುವನ್ನು ಎತ್ತಿಕೊಂಡು ಕಾಪಾಡಿ ಎಂದು ಕಿರುಚಾಡಿದ ಮಹಿಳೆ

 

Share This Article
Leave a Comment

Leave a Reply

Your email address will not be published. Required fields are marked *