ಶೃಂಗೇರಿ ಶಾರದಾಂಬೆಗೆ ಎಚ್‍ಡಿಕೆ ಮೊರೆ-ಸಪ್ತಗಿರಿವಾಸ ಸನ್ನಿಧಾನದಲ್ಲಿ ಸುಮಲತಾ ಸಂಕೀರ್ತನೆ

Public TV
1 Min Read

ಬೆಂಗಳೂರು: ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲು ಅಣಿಯಾಗಿದ್ದಾಯ್ತು. ನಟಿ ಸುಮಲತಾ ಅಂಬರೀಶ್ ಸ್ಪರ್ಧೆ ಘೋಷಣೆ ಮಾಡಿದ್ದಾಯ್ತು. ಇದೀಗ ಗೆಲುವಿಗಾಗಿ ಉಭಯ ಅಭ್ಯರ್ಥಿಗಳು ದೇವರ ಮೊರೆ ಹೋಗಿದ್ದಾರೆ. ಈಗಾಗಲೇ ನಿಖಿಲ್ ಜಯಕ್ಕಾಗಿ ತಂದೆ ಹೆಚ್.ಡಿ.ಕುಮಾರಸ್ವಾಮಿ ಶೃಂಗೇರಿ ಶಾರದೆ ಸನ್ನಿಧಾನದಲ್ಲಿ ನಾಮಪತ್ರ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಇತ್ತ ಸುಮಲತಾ ನಾಮಪತ್ರ ಹಿಡಿದುಕೊಂಡು ಶ್ರೀನಿವಾಸನ ಸನ್ನಿಧಿಗೆ ಹೊರಟಿದ್ದಾರೆ.

ಅತ್ತ ಶಕ್ತಿದೇವತೆಯ ಸನ್ನಿಧಾನಕ್ಕೆ ನಿಖಿಲ್ ಹೆಜ್ಜೆಯಿಡುತ್ತಿದ್ದಂತೆ ಸುಮಲತಾ ಕೂಡ ತಾವು ನಂಬುವ ತಿಮ್ಮಪ್ಪನ ಸನ್ನಿಧಾನಕ್ಕೆ ನಾಮಪತ್ರ ತೆಗೆದುಕೊಂಡು ತೆರಳಿ ಇಂದು ಪೂಜೆ ಸಲ್ಲಿಸಲಿದ್ದಾರೆ. ಅಷ್ಟೇ ಅಲ್ಲ ನಾಳೆ ನಾಮಪತ್ರ ಸಲ್ಲಿಕೆಗೂ ಮುನ್ನ ನಾಡಿನ ಅಧಿದೇವತೆ ಚಾಮುಂಡಿಗೂ ಅಗ್ರಪೂಜೆ ಸಲ್ಲಿಸಲಿದ್ದಾರೆ.

ಒಂದೇ ಕ್ಷೇತ್ರ ಇಬ್ಬರು ಭಕ್ತರ ಗೆಲುವಿನ ಬೇಡಿಕೆ ದೇವರು ಅದ್ಯಾರಿಗೆ ತಥಾಸ್ತು ಎಂದು ಆಶೀರ್ವಾದ ಮಾಡ್ತಾರೆ ಎಂಬುದ್ನು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಮಂಡ್ಯದ ಮಣ್ಣಿನ ಋಣ ಅದ್ಯಾರಿಗಿದೆಯೋ ಗೊತ್ತಿಲ್ಲ. ಆದ್ರೆ ದೇವರಿಗೆ ಮಾತ್ರ ಉಭಯ ಅಭ್ಯರ್ಥಿಗಳು ಜಿದ್ದಿಗೆ ಬಿದ್ದವರಂತೆ ಮೊರೆ ಇಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *