ಅಂಬಿ ಅದೃಷ್ಟದ ಮನೆಗೆ ಶೀಘ್ರವೇ ಸುಮಲತಾ ಶಿಫ್ಟ್!

Public TV
1 Min Read

ಮಂಡ್ಯ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಂಡ್ಯದಲ್ಲಿ ಮನೆ ಹುಡುಕುತ್ತಿದ್ದ ಸುಮಲತಾ ಅವರು ಅಂಬರೀಶ್ ಇದ್ದ ಬಾಡಿಗೆ ಮನೆಗೆ ಹೋಗಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆಯೇ ಮಂಡ್ಯಕ್ಕೆ ಬಂದಾಗ ಜಿಲ್ಲೆಯ ಜನರನ್ನು ಭೇಟಿ ಮಾಡಿ ಅವರ ಕಷ್ಟ ಸುಖ ಆಲಿಸಲು ಸಮಲತಾ ಸ್ವಂತ ಮನೆ ಮಾಡಲು ನಿರ್ಧಾರ ಮಾಡಿದ್ದರು. ಸ್ವಂತ ಮನೆ ಮಾಡಲು ತಡವಾಗುವುದರಿಂದ ತಕ್ಷಣಕ್ಕೆ ಚಾಮುಂಡೇಶ್ವರಿ ನಗರದಲ್ಲಿರುವ ಬಾಡಿಗೆ ಮನೆಯಲ್ಲಿರಲು ಸುಮಲತಾ ನಿರ್ಧರಿಸಿದ್ದಾರೆ.

ಅಂಬರೀಶ್ ಸಚಿವರಾಗಿದ್ದಾಗ ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ಮನೆ ಮಾಡಿದ್ದು, ಆ ಮನೆ ಅಂಬರೀಶ್ ಅವರಿಗೆ ಅದೃಷ್ಟದ ಮನೆ ಎಂಬ ಮಾತಿದೆ. ಆ ಮನೆಯನ್ನು ಬಾಡಿಗೆ ಪಡೆದ ನಂತರ ಅಂಬಿ ದಾಖಲೆ ಮತದಲ್ಲಿ ಗೆದ್ದು ಸಚಿವರಾಗಿದ್ದರು ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಹೀಗಾಗಿ ಅಂಬಿ ಇದ್ದ ಮನೆಯನ್ನೇ ತಾವು ಬಾಡಿಗೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದು, ಈ ಬಗ್ಗೆ ಮನೆ ಮಾಲೀಕರ ಜೊತೆ ಸುಮಲತಾ ಅವರು ಮಾತನಾಡಿದ್ದಾರೆ.

ಸುಮಲತಾ ಅವರಿಗೆ ಬಾಡಿಗೆ ನೀಡಲು ಮನೆ ಮಾಲೀಕ ಅಂಕಯ್ಯ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ಎಲ್ಲ ಮಾತುಕತೆ ಮುಗಿದರೆ ಕೆಲವೇ ದಿನದಲ್ಲಿ ಅಧಿಕೃತವಾಗಿ ಬಾಡಿಗೆ ಮನೆಗೆ ಸುಮಲತಾ ಅವರು ಶಿಫ್ಟ್ ಆಗಲಿದ್ದಾರೆ.

ಮಂಡ್ಯ ನಗರಕ್ಕೆ ಹೊಂದಿಕೊಂಡಂತಿರುವ ಮಂಜುನಾಥ ನಗರದಲ್ಲಿ ಅಂಬರೀಶ್ ಅವರ 60*40 ನಿವೇಶನ ಇದೆ. ಅಂಬರೀಶ್ ಅವರ ತಂದೆ ಹುಚ್ಚೇಗೌಡ ಅವರು ತಮ್ಮ ಮಗನ ಹೆಸರಿಗೆ ನಿವೇಶನವನ್ನು ರಿಜಿಸ್ಟರ್ ಮಾಡಿದ್ದರು. ನಂತರ ಅಂಬರೀಶ್ ತಾವು ಸಾಯುವ ಮುನ್ನ ಮಗ ಅಭಿಷೇಕ್ ಹೆಸರಿಗೆ ನಿವೇಶನವನ್ನು ರಿಜಿಸ್ಟರ್ ಮಾಡಿದ್ದಾರೆ. ಈಗ ತಮ್ಮ ಮಾವನಿಂದ ಮೊಮ್ಮಗ ಅಭಿಷೇಕ್‍ಗೆ ಬಂದಿರುವ ನಿವೇಶನದಲ್ಲೇ ಸ್ವಂತ ಮನೆ ಕಟ್ಟಲು ಸುಮಲತಾ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *