ಸುಮಲತಾ ರೋಡ್ ಶೋನಲ್ಲಿ ಜನಜಾತ್ರೆ

Public TV
1 Min Read

ಮಂಡ್ಯ: ಇಂದು ಲೋಕಸಭಾ ಚುನಾವಣೆ ಪ್ರಚಾರಕ್ಕೆ ಕೊನೆಯ ದಿನವಾಗಿದ್ದು, ಹೀಗಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಬಹಿರಂಗ ಸಮಾವೇಶಕ್ಕೆ ಅಪಾರ ಸಂಖ್ಯೆಯ ಜನಸಾಗರವೇ ಹರಿದು ಬರುತ್ತಿದೆ.

ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಸುಮಲತಾ ಅವರ ಬಹಿರಂಗ ಸಮಾವೇಶ ನಡೆಯಲಿದೆ. ಮಂಡ್ಯದ ಕಾಳಿಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸುಮಲತಾ ಅವರು ರ‍್ಯಾಲಿಯನ್ನು ಆರಂಭಿಸಿದ್ದಾರೆ. ಈಗಾಗಲೇ ದೇವಸ್ಥಾನದ ಅಂಗಳದಲ್ಲಿ ಜನಸಾಗರವಿದ್ದು, ರ‍್ಯಾಲಿಗೆ ಸುಮಲತಾ ಅಂಬರೀಶ್ ಬೆಂಬಲಿಗರು ಸಿದ್ಧತೆ ಮಾಡಿಕೊಂಡು ಹೊರಟಿದ್ದಾರೆ.

ಜನಪದ ಕಲಾವಿದರು ಮತ್ತು ಮತ್ತು ವಾದ್ಯದವರು ಸುಮಲತಾ, ದರ್ಶನ್ ಮತ್ತು ಯಶ್ ಅವರನ್ನು ಸ್ವಾಗತಿಸಿದ್ದಾರೆ. ಇತ್ತ ರ‍್ಯಾಲಿಯಲ್ಲಿ ಅಭಿಮಾನಿಗಳು ಪುಟ್ಟಣ್ಣಯ್ಯ ಮತ್ತು ಚೆಲುವರಾಯಸ್ವಾಮಿ ಫ್ಲೆಕ್ಸ್ ಹಿಡಿದಿದ್ದಾರೆ. ಜೊತೆಗೆ ಬಿಜೆಪಿ, ಕಾಂಗ್ರೆಸ್, ರೈತಸಂಘದ ಭಾವುಟಗಳು ಮಿಂಚುತ್ತಿವೆ. ಪುಟ್ಟಣ್ಣಯ್ಯ, ಚೆಲುವರಾಯಸ್ವಾಮಿ ಬೆಂಬಲಿಗರು ಮತ್ತು ಕಾರ್ಯಕರ್ತರು ಸಾವಿರಾರು ಸಂಖ್ಯೆಯ ಜನರು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.

ಇತ್ತ ಸಮಾವೇಶಕ್ಕೆ ಸಾವಿರಾರು ಜನರು ಆಗಮಿಸುತ್ತಿದ್ದು, ಸಮಾವೇಶದ ಕುರ್ಚಿಗಳು ಭರ್ತಿಯಾಗಿ ಜನರು ನಿಂತಿದ್ದಾರೆ. ಸಮಾವೇಶದಲ್ಲೂ ರೈತ ಸಂಘ ಮತ್ತು ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *