ವಿಚ್ಛೇದನ ಕೇಸ್ ಹಿಂದಕ್ಕೆ ಪಡೆದ ಸುದೀಪ್ ದಂಪತಿ

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಸುದೀಪ್ ದಂಪತಿ ಕೋರ್ಟ್ ನಲ್ಲಿ ಸಲ್ಲಿಸಿದ್ದ ವಿಚ್ಛೇದನ ಕೇಸ್ ಹಿಂದಕ್ಕೆ ಪಡೆದುಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗೌರಿ ಹಬ್ಬದ ದಿನದಂದು ಗುಡ್ ನ್ಯೂಸ್ ನೀಡಿದ್ದಾರೆ.

ಎರಡು ವರ್ಷಗಳ ಹಿಂದೆ ಸುದೀಪ್ ವಿಚ್ಚೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ತಮ್ಮ ಮುದ್ದಿನ ಮಗಳ ಭವಿಷ್ಯಕ್ಕಾಗಿ ಡೈವೋರ್ಸ್ ನಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಸುದೀಪ್ ಮತ್ತು ಪ್ರಿಯಾ ಇಬ್ಬರೂ ನಮಗೆ ಕೇಸ್ ನಡೆಸುವುದಕ್ಕೆ ಇಷ್ಟವಿಲ್ಲ ಎಂದು ಹೇಳಿ ಕೇಸನ್ನು ಹಿಂಪಡೆದಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ ಎಂದು ಸುದೀಪ್ ಪರ ವಕೀಲ ಭಾಸ್ಕರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಕೇಸ್ ದಾಖಲಿಸಿದ ಬಳಿಕ ದಂಪತಿಗೆ ಕೋರ್ಟಿಗೆ ಹಾಜರಾಗುವಂತೆ ಹೇಳಿತ್ತು. ಆದರೆ ಸುದೀಪ್ ಮತ್ತು ಪ್ರಿಯಾ ಒಮ್ಮೆಯೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಮನೆಯಲ್ಲಿ ಕೌನ್ಸಿಲಿಂಗ್ ಬಳಿಕ ದಂಪತಿ ಒಂದಾಗಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *