ಮಿಡ್‍ವೀಕ್ ಎಲಿಮಿನೇಷನ್ ಶಾಕ್ ಕೊಟ್ಟ ಕಿಚ್ಚ

Public TV
1 Min Read

– ಸ್ಪರ್ಧಿಗಳ ಎದೆಯಲ್ಲಿ ಢವಢವ

ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಯ ಹಂತ ತಲುಪಿದ್ದು, ಇನ್ನೂ ಒಂದು ವಾರದಲ್ಲಿ ಫಿನಾಲೆ ನಡೆಯಲಿದೆ. ಇದೀಗ ಫಿನಾಲೆಗೆ ಮುನ್ನ ಸುದೀಪ್ ಸ್ಪರ್ಧಿಗಳಿಗೆ ಮಿಡ್‍ವೀಕ್ ಎಲಿಮಿನೇಷನ್‍ನ ಶಾಕ್ ಕೊಟ್ಟಿದ್ದಾರೆ. ಇದರಿಂದ ಮನೆಯಲ್ಲಿರುವವರಿಗೆ ಆತಂಕ ಶುರುವಾಗಿದೆ.

ಶನಿವಾರ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಸುದೀಪ್ ಮನೆಗೆ ಮಂದಿಗೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಅದೇನೆಂದರೆ ಭಾನುವಾರ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಫಿನಾಲೆ ವಾರದಲ್ಲಿ ಮಿಡ್‍ವೀಕ್ ಎಲಿಮಿನೇಷನ್ ಇರುತ್ತದೆ ಎಂದು ಸ್ಪರ್ಧಿಗಳಿಗೆ ತಿಳಿಸಿದ್ದಾರೆ. ಇದಲ್ಲದೇ ಮಿಡ್‍ವೀಕಲ್ಲಿ ಎಲಿಮಿನೇಟ್ ಆಗುವ ಒಬ್ಬ ಸ್ಪರ್ಧಿ ಸುದೀಪ್ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ. ಬದಲಿಗೆ ಅವರು ಫಿನಾಲೆ ದಿನ ಸುದೀಪ್ ಜೊತೆಗೆ ಮಾತನಾಡಲಿದ್ದಾರೆ.

ಈ ವಾರ ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಆದರೆ ಅವರಿಗೆ ಬಿಗ್‍ಬಾಸ್ ಫಿನಾಲೆ ಟಿಕೆಟ್ ಗೆಲ್ಲುವ ಒಂದು ಅವಕಾಶ ಕೊಟ್ಟಿದ್ದರು. ಬಿಗ್‍ಬಾಸ್ ನೀಡಿದ್ದ ಅವಕಾಶದಲ್ಲಿ ವಾಸುಕಿ ವೈಭವ್ ಗೆದ್ದು ‘ಬಿಗ್‍ಬಾಸ್ ಸೀಸನ್ 7’ ರ ಮೊದಲ ಫೈನಲಿಸ್ಟ್ ಆಗಿದ್ದರು. ಹೀಗಾಗಿ ಈ ವಾರ ಮನೆಯಿಂದ ಹೊರ ಹೋಗಲು ಪ್ರಿಯಾಂಕಾ, ಭೂಮಿ ಶೆಟ್ಟಿ, ದೀಪಿಕಾ ದಾಸ್, ಕುರಿ ಪ್ರತಾಪ್, ಶೈನ್ ಶೆಟ್ಟಿ, ಹರೀಶ್ ರಾಜ್ ಆರು ಮಂದಿ ನಾಮಿನೇಟ್ ಆಗಿದ್ದರು.

‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಆರು ಸ್ಪರ್ಧಿಗಳಲ್ಲಿ ಕುರಿ ಪ್ರತಾಪ್ ಮತ್ತು ಶೈನ್ ಶೆಟ್ಟಿ ಸೇಫ್ ಆಗಿದ್ದು, ಫಿನಾಲೆ ಹಂತಕ್ಕೆ ಕಾಲಿಟ್ಟಿದ್ದಾರೆ. ಆದರೆ ಇದು ತಾತ್ಕಾಲಿಕ ಮಾತ್ರ. ಯಾಕೆಂದರೆ ಮುಂದಿನ ವಾರ ಮಿಡ್‍ವೀಕ್ ಎಲಿಮಿನೇಷನ್ ಇದೆ. ಹೀಗಾಗಿ ಮುಂದಿನ ವಾರ ನಡುರಾತ್ರಿಯಲ್ಲಿ ಒಬ್ಬರು ಮನೆಯಿಂದ  ಹೋಗಲಿದ್ದಾರೆ. ಉಳಿದ ಐದು ಮಂದಿ ಫಿನಾಲೆ ತಲುಪಲಿದ್ದಾರೆ.

ಇನ್ನೂ ಹರೀಶ್ ರಾಜ್, ಭೂಮಿ, ದೀಪಿಕಾ ಮತ್ತು ಪ್ರಿಯಾಂಕಾ ನಾಲ್ವರು ಉಳಿದುಕೊಂಡಿದ್ದಾರೆ. ಈ ನಾಲ್ವರಲ್ಲಿ ಇಂದು ಒಬ್ಬರು ಬಿಗ್ ಮನೆಯಿಂದ ಹೊರ ಹೋಗುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *