ಪರೀಕ್ಷೆ ದಿನ 5ನೇ ಅಂತಸ್ತಿನ ಮಹಡಿ ಮೇಲಿಂದ ಬಿದ್ದು ವಿದ್ಯಾರ್ಥಿ ಸಾವು

Public TV
1 Min Read

ಆನೇಕಲ್: ಪರೀಕ್ಷೆ ದಿನವೇ ವಿದ್ಯಾರ್ಥಿಯೊಬ್ಬ ತನ್ನ ಮನೆಯ ಐದನೇ ಮಹಡಿಯಿಂದ ಬಿಟ್ಟು ಸಾವನ್ನಪ್ಪಿರುವ ಘಟನೆ ತಾಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

10ನೇ ತರಗತಿ ಓದುತ್ತಿದ್ದ ಆದಿತ್ಯ ಮೃತ ದುರ್ದೈವಿ. ಈತ ಬೆಂಗಳೂರು ಹೊರವಲಯದ ಹೆಬ್ಬಗೋಡಿ ಬಳಿಯ ಕಮ್ಮಸಂದ್ರದ ಡ್ಯಾಡಿ ಗಾರ್ಡನ್ ನಲ್ಲಿನ ವಿಲ್ಲಾವೊಂದರ ನಿವಾಸಿಯಾಗಿದ್ದ. ಈತನ ತಂದೆ-ತಾಯಿ ಇಬ್ಬರೂ ವೈದ್ಯರು. ಇದನ್ನೂ ಓದಿ: ರಾಜ್ಯದಲ್ಲಿ ಒಂದು ಕಡೆ ಹಿಜಬ್ ಕಿಡಿ ಇನ್ನೊಂದೆಡೆ ಕೇಸರಿ, ನೀಲಿ ಶಾಲು ಸಂಘರ್ಷ!

ಆದಿತ್ಯ ಬುಧವಾರ ಬೆಳಗ್ಗೆ ಎದ್ದವನು ಮನೆಯಲ್ಲಿ ಇದ್ದ. ನಂತರ ಮಧ್ಯಾಹ್ನ ಒಂದು ಗಂಟೆಗೆ ಆತನಿಗೆ ಪರೀಕ್ಷೆ ಇತ್ತು. ಇದರಿಂದ ಬೆಳಗ್ಗೆಯಿಂದ ಮನೆಯಲ್ಲಿಯೇ ಓದುತ್ತಿದ್ದ. ಮದ್ಯಾಹ್ನ 12 ಗಂಟೆಯ ಸುಮಾರಿಗೆ ಅಂಗಡಿಗೆ ಹೋಗಿ ಬರ್ತೀನಿ ಅಂತ ಹೋಗಿದ್ದಾನೆ. ಆದರೆ ಡ್ಯಾಡಿ ಗಾರ್ಡನ್‌ನಲ್ಲಿರುವ ಐದು ಅಂತಸ್ತಿನ ಕಟ್ಟಡ ಮೇಲಿಂದ ಹಾರಿ ತನ್ನ ಪ್ರಾಣ ಬಿಟ್ಟಿದ್ದಾನೆ.

ಮೇಲಿಂದ ಬಿದ್ದ ರಭಸಕ್ಕೆ ಸ್ಥಳೀಯರು ಗಾಬರಿಯಿಂದ ಹೊರಬಂದು ನೋಡಿದ್ದಾರೆ. ಆದಿತ್ಯ ಮೇಲಿಂದ ಬಿದ್ದ ಪರಿಣಾಮ ತಲೆ ಛಿದ್ರವಾಗಿದೆ. ಸ್ಥಳೀಯರು ಆತನನ್ನು ಗುರುತಿಸಿ ತಕ್ಷಣ ಆತನ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಕಾಲೇಜಿನಲ್ಲಿ ಕೇಸರಿ ಧ್ವಜ ಹಾರಾಟ, ಕಲ್ಲು ತೂರಾಟ – ನಿಷೇಧಾಜ್ಞೆ ಜಾರಿ

POLICE JEEP

ಘಟನೆ ಬಳಿಕ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಮಲ್ಲೇಶ್ ಅವರು ಸಾವಿನ ನಿಖರ ಕಾರಣದ ಬಗ್ಗೆ ಪರಿಶೀಲನೆ ನಡೆಸಿದ್ದು, ಆದಿತ್ಯನ ಮೊಬೈಲ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *