ಚೆನ್ನಾಗಿ ಓದು ಅಂತಾ ಹೇಳಿದಕ್ಕೆ ಆತ್ಮಹತ್ಯೆಗೆ ಶರಣಾದ ಮಗ

Public TV
1 Min Read

ಬೆಂಗಳೂರು: ಪೋಷಕರು ಓದಿನ ಕಡೆ ಗಮನ ಕೊಡು ಅಂದಿದ್ದಕ್ಕೆ ಮನನೊಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಸೋಲದೇವನಹಳ್ಳಿಯಲ್ಲಿ ನಡೆದಿದೆ.

ಮಂಜುನಾಥ್ ರೆಡ್ಡಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮಂಜುನಾಥ್ ನಗರದ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಮಂಜುನಾಥ್ ಓದಿನಲ್ಲಿ ವೀಕ್ ಇದ್ದ ಅಂತ ಪೋಷಕರು ಮಗ ಚೆನ್ನಾಗಿ ಓದಲಿ ಅಂತ ಟ್ಯೂಷನ್ ಗೆ ಸೇರಿಸಿದ್ದರು.

ಇದನ್ನು ಓದಿ: `ಐ ಮಿಸ್ ಯು’ ಅಮ್ಮ ಎಂದು ಪತ್ರ ಬರೆದಿಟ್ಟು ಮನೆ ಬಿಟ್ಟು ಹೋದ ಹತ್ತನೇ ತರಗತಿ ವಿದ್ಯಾರ್ಥಿ

ಬುಧವಾರ ಸಂಜೆ ಟ್ಯೂಷನ್ ಕ್ಲಾಸ್ ಮುಗಿಸಿಕೊಂಡ ಬಂದ ಮಂಜುನಾಥ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ. ಇನ್ನು ಮಂಜುನಾಥ್ ತಂದೆ ಚಂದ್ರ ಶೇಖರ್ ರೆಡ್ಡಿ ಗಾರೆ ಕೆಲಸ ಮಾಡಿಕೊಂಡಿದ್ದಾರೆ. ಸದ್ಯ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತ ದೇಹವನ್ನು ಮರೋಣತ್ತರ ಪರೀಕ್ಷೆಗಾಗಿ ಸಪ್ತಗಿರಿ ಆಸ್ಪತ್ರೆಗೆ ರವಾನಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *