ಚಲಿಸುತ್ತಿದ್ದ ರೈಲಿನಲ್ಲೇ ಮಂಗಳಮುಖಿಯರ ಗೂಂಡಾಗಿರಿ- ವಿದ್ಯಾರ್ಥಿ ಮೇಲೆ ಹಲ್ಲೆ

Public TV
1 Min Read

ಬೀದರ್: ಚಲಿಸುತ್ತಿದ್ದ ರೈಲಿನಲ್ಲಿಯೇ ಮಂಗಳಮುಖಿಯರು ಗೂಂಡಾಗಿರಿ ನಡೆಸಿರೋ ಘಟನೆಯೊಂದು ಬೀದರ್ ನಲ್ಲಿ ನಡೆದಿದೆ.

ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಮಂಗಳಮುಖಿಯರು ವಿದ್ಯಾರ್ಥಿಗೆ ಹಣ ಕೇಳಿದ್ದಾರೆ. ಆದ್ರೆ ಹಣ ನೀಡದ ಕಾರಣ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ವಿದ್ಯಾರ್ಥಿಯ ಕಿವಿಯಲ್ಲಿ ರಕ್ತ ಬಂದಿದೆ.

ರೈಲಿನಲ್ಲಿ ಮುಂಗಳಮುಖಿಯರು ನಡೆಸಿದ ಈ ಗೂಂಡಾಗಿರಿಯನ್ನು ಬೀದರ್ ನ ವ್ಯಕ್ತಿಯೊಬ್ಬರು ರಹಸ್ಯವಾಗಿ ಮೊಬೈಲ್ ನಲ್ಲಿ ಚಿತ್ರಿಕರಣ ಮಾಡಿದ್ದಾರೆ. ಈ ದೃಶ್ಯ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

ಬೆಂಗಳೂರು-ದೆಹಲಿ ಎಕ್ಸ್ ಪ್ರೆಸ್ ನಲ್ಲಿ 4 ಮಂಗಳಮುಖಿಯರು ಈ ಕೃತ್ಯ ಎಸಗಿದ್ದಾರೆ. ಗೌರಿಬಿದನೂರು ಸ್ಟೇಷನ್ ನಲ್ಲಿ ಹತ್ತಿ ಪುಟ್ಟಪತಿ9 ಸ್ಟೇಷನ್ ವರೆಗೆ ಗೂಂಡಾಗಿರಿ ಮಾಡಿದ್ದಾರೆ. ಇನ್ನು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿರುವುದನ್ನು ಪ್ರಶ್ನಿಸಿದ ಸಹಪ್ರಯಾಣಿಕರ ಮೇಲೂ ಅವರು ಹಲ್ಲೆ ಮಾಡಿದ್ದಾರೆ. ಬಳಿಕ ಮಂಗಳಮುಖಿಯರು ಮುಂದಿನ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *