ತಾನು ಸುಧಾಕರ್‌ಗೆ ಆಶೀರ್ವಾದ ಮಾಡಲು ಬಂದಿದ್ದೇನೆ- ಮಹಿಳೆಯ ವಿಚಿತ್ರ ವರ್ತನೆ

By
1 Min Read

ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಸುಧಾಕರ್ (Sudhakar) ಕಾರ್ಯಕ್ರಮದಲ್ಲಿ ಮೈ ಮೇಲೆ ದೇವರು ಬಂದಿದೆ ಅಂತ ಓಂ ಶಕ್ತಿ (Om Shakti) ಮಾಲಾಧಾರಿ ಮಹಿಳೆಯೊಬ್ಬಳು ವಿಚಿತ್ರವಾಗಿ ವರ್ತಿಸಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ನಡೆದಿದೆ.

ಅಂದಹಾಗೆ ಮುಷ್ಟೂರು ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಮಹಿಳಾ ಸ್ವಸಹಾಯ ಸ್ತ್ರೀ ಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣಾ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಹಿಳೆಯೊಬ್ಬಳು ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಮೈ ಮೇಲೆ ಓಂ ಶಕ್ತಿ ದೇವಿ ಬಂದಿದ್ದಾಳೆ ಅಂತ ಜೋರಾಗಿ ಕಿರುಚಿಕೊಂಡು ವೇದಿಕೆಯತ್ತ ಮುನ್ನುಗ್ಗಿದ್ದಳು. ಕೂಡಲೇ ಎಚ್ಚೆತ್ತ ಪೊಲೀಸರು ಮಹಿಳೆಯನ್ನು ತಡೆದರು. ಇದನ್ನೂ ಓದಿ: ‘ಗೋವನ್ನು’ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಮನವಿ – ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

ಇದರಿಂದ ಕೆರಳಿದ ಮಹಿಳೆ ನೆಲದ ಮೇಲೆ ಕೂತು ನಾಲಿಗೆ ಹೊರಚಾಚಿ ಜೋರಾಗಿ ನಗಾಡುತ್ತಾ ಏಯ್ ನನ್ನನ್ನ ಬಿಡೋ ಅಂತ ಪೊಲೀಸರಿಗೆ ಅವಾಜ್ ಹಾಕಿ ವಿಚಿತ್ರವಾಗಿ ವರ್ತಿಸಿದ್ದಾಳೆ. ಇದನ್ನು ಕಂಡ ಇತರೆ ಮಹಿಳೆಯರು ಕಕ್ಕಾಬಿಕ್ಕಿಯಾಗಿ ಕೆಲ ಕಾಲ ಗಾಬರಿಗೊಳಗಾದರು. ಇನ್ನೂ ಕೆಲ ಸಮಯದ ನಂತರ ಮಹಿಳೆ ಸುಮ್ಮನಾಗಿದ್ದು ಎದ್ದು ಹೊರಟಿದ್ದಾಳೆ. ಇನ್ನೂ ತಾನು ಡಾಕ್ಟರ್‌ಗೆ ಸುಧಾಕರ್‌ಗೆ ಆಶೀರ್ವಾದ ಮಾಡಲು ಬಂದಿದ್ದೇನೆ ಅಂತ ಮಹಿಳೆ ಹೇಳಿದ್ದಳು. ಆದರೆ ಓಂ ಶಕ್ತಿ ದೇವಸ್ಥಾನದ ನಿರ್ಮಾಣಕ್ಕೆ ಮಹಿಳೆ ಸಚಿವರಿಗೆ ಬೇಡಿಕೆ ಇಡಲು ಮುಂದಾಗಿದ್ದಳು ಎನ್ನಲಾಗಿದೆ. ಇದನ್ನೂ ಓದಿ: ಮಗಳ ಹೆರಿಗೆಗೆ ತೆರಳಲು ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಅನುಮತಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *