ಮೂರು ಮೆಟ್ರೋ ರೈಲುಗಳ ಮೇಲೆ ಕಲ್ಲು ತೂರಾಟ

Public TV
0 Min Read

ಬೆಂಗಳೂರು: ಕೆಲ ಕಿಡಿಗೇಡಿಗಳು ಮೂರು ಮೆಟ್ರೋ ರೈಲುಗಳು ಮೇಲೆ ಕಲ್ಲು ತೂರಾಟ ಮಾಡಿದ್ದು, ರೈಲಿನ ಗಾಜಿನ ಪರದೆ ಜಖಂಗೊಂಡಿದೆ.

ಮಂತ್ರಿ ಸ್ಕ್ವೈರ್ ಮತ್ತು ಶ್ರೀರಾಂಪುರ ನಿಲ್ದಾಣದ ಮಾರ್ಗ ಮಧ್ಯೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಸುರಂಗ ಮಾರ್ಗದಿಂದ ರೈಲು ಹೊರ ಬರುತ್ತಿದ್ದಂತೆ ಕಲ್ಲು ಎಸೆಯಲಾಗಿದೆ. ಕೆಲವರು ಮೆಟ್ರೋ ರೈಲು ಮಾರ್ಗದ ಮಧ್ಯೆ ಕಸದ ಬ್ಯಾಗ್ ಬಿಸಾಡುತ್ತಿದ್ದು, ಅಧಿಕಾರಿಗಳು ರೈಲು ನಿಲ್ಲಿಸಿ ಬ್ಯಾಗ್ ಗಳ ತೆರವು ಮಾಡುತ್ತಿದ್ದಾರೆ.

ಕಿಡಿಗೇಡಿಗಳ ಕೃತ್ಯದಿಂದ ಬೇಸತ್ತ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *