ಬಿಎಂಟಿಸಿಯ 12 ಬಸ್ ಮೇಲೆ ಕಲ್ಲು

Public TV
1 Min Read

ಬೆಂಗಳೂರು: ಕಾರ್ಮಿಕರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಬಿಎಂಟಿಸಿ ಬಸ್ ಗಳ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ನಾಗರಬಾವಿಯ ಮಾರುತಿ ನಗರದ 235 ಕೆ ಮತ್ತು 401 ನಂಬರಿನ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.

235 ಕೆ ನಂಬರ್ ಬಸ್ ಮೆಜೆಸ್ಟಿಕ್ ನಿಂದ ದೊಡ್ಡ ಬಸ್ತಿ ಕಡೆ ತೆರಳುತ್ತಿತ್ತು. 401 ಯಶವಂತಪುರದಿಂದ ಕೆಂಗೇರಿ ಕಡೆ ತೆರಳುತ್ತಿತ್ತು. ಅಂಜನಾ ನಗರದ ಬಳಿ ಡಿಪೋದಿಂದ ಹೊರಟ 6 ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಮಧ್ಯರಾತ್ರಿಯಿಂದ ಇದೂವರೆಗೂ 12 ಬಸ್ ಗಳಿಗೆ ಕಲ್ಲು ಎಸೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಚಂದಾಪುರದ ಸೂರ್ಯಸಿಟಿ ಘಟಕ (32)ರ ಡಿಪೋದಲ್ಲಿ 150 ಕ್ಕೂ ಹೆಚ್ಚು ಬಸ್ಸುಗಳನ್ನು ನಿಲ್ಲಿಸಲಾಗಿದೆ. ಬೆಳ್ಳಂಬೆಳಗ್ಗೆ ಬಸ್ಸುಗಳ ಮೇಲೆ ತೂರಾಟ ನಡೆದಿದ್ದರಿಂದ ಎಲ್ಲ ಡಿಪೋಗಳಿಗೆ ಬಿಎಂಟಿಸಿ ಮೇಲಾಧಿಕಾರಿಗಳು ಸಂದೇಶ ರವಾನಿಸಿದ್ದು, ಸಂಚಾರ ಆರಂಭಿಸದಂತೆ ಸೂಚಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಮತ್ತೆ ಅದೇಶ ಬರೋವರೆಗೂ ಬಸ್ಸುಗಳನ್ನು ರಸ್ತೆಗಿಳಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.

ಕೆಎಸ್ಆರ್ ಟಿಸಿ ಯಲ್ಲಿರುವ 600 ಬಸ್ ಗಳಲ್ಲಿ 450ಕ್ಕೂ ಹೆಚ್ಚು ವಾಹನಗಳು ಸಂಚಾರ ಆರಂಭಿಸಿವೆ. ಪರಿಸ್ಥಿತಿ ನೋಡಿಕೊಂಡು ಬಸ್ ಗಳನ್ನು ರಸ್ತೆಗಿಳಿಸಲು ನಿರ್ಧರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದ್ರೆ ಬಂದ್ ಹಿನ್ನೆಲೆಯಲ್ಲಿ ನಿಲ್ದಾಣಗಳು ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *