ಕೆಲ ದಿನಗಳಿಂದ ಬೇಸಿಗೆ ಚುರುಕು ಬಿಸಿಲು ಜನರನ್ನು ತಾಗುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಕಳೆದ ಎರಡು ತಿಂಗಳಿನಿಂದ ಚಳಿ ಜನರನ್ನು ಹೊರಗೆ ಬರದಂತೆ ಮಾಡುತ್ತಿದೆ. ಚಳಿ ಮತ್ತು ಮಳೆಯಿಂದಾಗಿ ಶೀತ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ದಕ್ಷಿಣ ಒಳನಾಡು ಮತ್ತು ಬೆಂಗಳೂರು ಪ್ರದೇಶಗಳಲ್ಲಿ ಹವಾಮಾನ ಸ್ಥಿರವಾಗಿದ್ದು, ಉತ್ತರ ಕರ್ನಾಟಕದ ಭಾಗಗಳಲ್ಲಿ ಚಳಿ ಎಂದಿನಂತೆ ಮುಂದುವರಿದಿದೆ. ಹಲವು ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ ದಾಖಲಾಗುತ್ತಿದೆ. ಅಂತೆಯೇ ಬಿಸಿಲು ಸಹ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 29-16
ಮಂಗಳೂರು: 31-22
ಶಿವಮೊಗ್ಗ: 34-18
ಬೆಳಗಾವಿ: 33-16
ಮೈಸೂರು: 32-18
ಮಂಡ್ಯ: 32-18
ರಾಮನಗರ: 31-17
ಹಾಸನ: 31-17
ಚಾಮರಾಜನಗರ: 32-18
ಚಿಕ್ಕಬಳ್ಳಾಪುರ: 30-16
ಕೋಲಾರ: 29-16
ತುಮಕೂರು: 31-17
ಉಡುಪಿ: 32-22
ಕಾರವಾರ: 31-22
ಚಿಕ್ಕಮಗಳೂರು: 31-27
ದಾವಣಗೆರೆ: 34-18
ಚಿತ್ರದುರ್ಗ: 32-18
ಹಾವೇರಿ: 34-18
ಬಳ್ಳಾರಿ: 33-19
ಗದಗ: 33-17
ಕೊಪ್ಪಳ: 34-17
ರಾಯಚೂರು: 32-18
ಯಾದಗಿರಿ: 33-18
ವಿಜಯಪುರ: 33-18
ಬೀದರ್: 31-16
ಕಲಬುರಗಿ: 33-17
ಬಾಗಲಕೋಟೆ: 34-18